ಕರ್ನಾಟಕ

karnataka

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ವಿಚಾರ: ಠರಾವು ಪ್ರಶ್ನಿಸಿದ್ದ ಅರ್ಜಿ ತಿರಸ್ಕರಿಸಿದ ಹೈಕೋರ್ಟ್​

By ETV Bharat Karnataka Team

Published : Sep 15, 2023, 2:10 PM IST

Updated : Sep 15, 2023, 8:49 PM IST

Ganeshotsava issue at Hubli Eidga Maidan: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಇಂದು (ಶುಕ್ರವಾರ) ಧಾರವಾಡ ಹೈಕೋರ್ಟ್ ಪೀಠ ತಿರಸ್ಕರಿಸಿದೆ.

High Court
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ವಿಚಾರ: ಅಂಜುಮನ್ ಇಸ್ಲಾಂ ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್​

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ವಿಚಾರ: ಠರಾವು ಪ್ರಶ್ನಿಸಿದ್ದ ಅರ್ಜಿ ತಿರಸ್ಕರಿಸಿದ ಹೈಕೋರ್ಟ್​

ಧಾರವಾಡ:ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಇಂದು (ಶುಕ್ರವಾರ) ಧಾರವಾಡ ಹೈಕೋರ್ಟ್ ಪೀಠವು ತಿರಸ್ಕರಿಸಿತು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಲು ಐದು ವರ್ಷಗಳವರೆಗೆ ಅವಕಾಶ ನೀಡಿ ಠರಾವು ಪಾಸ್​ ಮಾಡಿತ್ತು. ಈ ಠರಾವಿಗೆ ತಡೆಯಾಜ್ಞೆ ಕೋರಿ ಹುಬ್ಬಳ್ಳಿಯ ಅಂಜುಮನ್ ಇಸ್ಲಾಂ ಸಂಸ್ಥೆ ಅರ್ಜಿ ಸಲ್ಲಿಸಿತ್ತು.

ಈ ಕುರಿತು ಹು-ಧಾ ಪಾಲಿಕೆ ಮೇಯರ್ ಪರ ವಕೀಲ ಶಿವರಾಜ್ ಬೆಳ್ಳಕ್ಕಿ ಮಾತನಾಡಿ, ಮೂರು ದಿನಗಳ ಕಾಲ ಗಣೇಶ ಪ್ರತಿಷ್ಠಾಪನೆಗೆ ಪಾಲಿಕೆ ಠರಾವು ಪಾಸ್ ಮಾಡಿತ್ತು. ಈ ಸಂಬಂಧ ಏಕಸದಸ್ಯ ಪೀಠದ ಮುಂದೆ ಹುಬ್ಬಳ್ಳಿ ಅಂಜುಮನ್ ಸಂಸ್ಥೆ ಅರ್ಜಿ ಸಲ್ಲಿಸಿತ್ತು. ಠರಾವಿಗೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದರು ಎಂದು ಹೇಳಿದರು. ಇದು ಪ್ರಾರ್ಥನೆ ಮಾಡಲು ಮಾತ್ರ ಇರುವ ಮೈದಾನ. ಇಲ್ಲಿ ಬೇರೆಯವರೆಗೆ ಕೊಡಬಾರದು ಎಂದು ವಾದ ಮಾಡಿದ್ದರು. ಆದರೆ, ಈ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಹೀಗಾಗಿ ಸದ್ಯಕ್ಕೆ ಗಣೇಶ ಪ್ರತಿಷ್ಠಾಪನೆ ಮಾಡಲು ತೊಂದರೆ ಇಲ್ಲ ಎಂದರು.

ಹಿರಿಯ ವಕೀಲ ಪ್ರಭುಲಿಂಗ ನಾವಲಗಿ ಪಾಲಿಕೆ ಮೇಯರ್ ಪರ ವಾದ ಮಂಡಿಸಿದ್ದರು. ಇಲ್ಲಿ ರಂಜಾನ್ ಮತ್ತು ಬಕ್ರೀದ್ ಸಮಯದಲ್ಲಿ ಪ್ರಾರ್ಥನೆ ಮಾತ್ರ ಅವಕಾಶ ಇದೆ ಎಂದು ಪ್ರತಿವಾದ ಮಾಡಲಾಗಿತ್ತು ಎಂದು ಬೆಳ್ಳಕ್ಕಿ ವಿವರಿಸಿದರು.

ಶಾಸಕ ಅರವಿಂದ ಬೆಲ್ಲದ್ ಮಾತನಾಡಿ, ದೀರ್ಘಕಾಲ ವಾದ-ಪ್ರತಿವಾದಗಳನ್ನು ಕೋರ್ಟ್​ ಆಲಿಸಿದೆ. ಈ ಮೈದಾನದ ಹಿನ್ನೆಲೆಯಲ್ಲಿ ಹಾಗೂ ಮಾಲೀಕರು ಯಾರು ಎಂಬ ವಿಷಯದ ಬಗ್ಗೆ ಕೂಲಂಕಷವಾಗಿ ಪ್ರಸ್ತಾಪವಾಯಿತು. ನ್ಯಾಯಾಲಯವು ಸ್ಥಳದ ಮಾಲೀಕರು ಪಾಲಿಕೆಯವರು. ಈಗ ಅರ್ಜಿಯನ್ನು ಸಲ್ಲಿಸಿದ ಅಂಜುಮನ್ ಸಂಸ್ಥೆಯವರು ಕೇವಲ ಲೈಸನ್ಸ್​ ಹೊಂದಿದವರು. ವರ್ಷಕ್ಕೆ ಎರಡು ಸಲ ಪ್ರಾರ್ಥನೆ ಸಲ್ಲಿಸಲು ಅಗತ್ಯವಾದರೆ ಪಾಲಿಕೆ ಅನುಮತಿ ನೀಡಬಹುದು. ಯಾವುದೇ ರೀತಿಯಿಂದ ಪಾಲಿಕೆಯ ಕೆಲಸ, ಕಾರ್ಯಗಳಿಗೆ ಅಂಜುಮನ್ ಸಂಸ್ಥೆಯವರು ಅಡ್ಡಿಪಡಿಸುವ ಹಕ್ಕಿಲ್ಲ ಎಂಬ ವಿಷಯವನ್ನು ನ್ಯಾಯಾಲಯ ಮನಗಂಡು ಅವರ ಅರ್ಜಿಯನ್ನು ತಿರಸ್ಕಾರ ಮಾಡಿದೆ. ಇದು ಹುಬ್ಬಳ್ಳಿ ಹಾಗೂ ಕರ್ನಾಟಕದ ಜನತೆಗೆ ಸಂದ ಜಯ ಎಂದರು.

ಮುಂದುವರೆದು ಮಾತನಾಡಿದ ಅವರು, ಈಗ ರಾಜ್ಯ ಸರ್ಕಾರಕ್ಕೆ ಯಾವುದೇ ನೆಪವೊಡ್ಡುವ ಅವಕಾಶವಿಲ್ಲ. ಹೀಗಾಗಿ ಚೆನ್ನಮ್ಮನ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ಕೊಡಬೇಕೆಂದು ನಾವು ಸಿದ್ದರಾಮಯ್ಯ ಅವರಿಗೆ ಒತ್ತಾಯ ಮಾಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ:ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ವಿಚಾರ: ಇಂದು ಹೈಕೋರ್ಟ್​ನಲ್ಲಿ ಅರ್ಜಿ ವಿಚಾರಣೆ

Last Updated : Sep 15, 2023, 8:49 PM IST

ABOUT THE AUTHOR

...view details