ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ ಚಾಲಕನಿಂದ ಭಾರತಾಂಬೆ ಪುತ್ರರಿಗೆ ಉಚಿತ ಸೇವೆ... ಏನೀ ಫ್ರೀ ಸರ್ವೀಸ್​ - Free service from Hubli's driver

ದೇಶ ಕಾಯುವ ಸೈನಿಕರಿಗೆ ಸೇವೆ ಸಲ್ಲಿಸಬೇಕೆಂಬ ಮಹದಾಸೆಯಿಂದ ಹುಬ್ಬಳ್ಳಿಯ ಚಾಲಕನೊಬ್ಬ ಯೋಧರಿಗೆ ಉಚಿತ ಸೇವೆ ನೀಡುವ ಮೂಲಕ ಇತರರಿಗೂ ಮಾದರಿಯಾಗಿದ್ದಾನೆ.

ಚಾಲಕನಿಂದ ಯೋಧರಿಗೆ ಉಚಿತ ಸೇವೆಅ

By

Published : Sep 16, 2019, 3:29 PM IST

ಹುಬ್ಬಳ್ಳಿ:ಕ್ಯಾಬ್​​ ಚಾಲಕನಾಗಿ ಕಾರ್ಯನಿರ್ವಹಿಸುತ್ತಿರುವ ರಮೇಶ ಅವರು ಸೈನಿಕರಿಗಾಗಿ ಕಳೆದ ಹಲವು ವರ್ಷಗಳಿಂದ ತಮ್ಮ ವಾಹನದಲ್ಲಿ ಉಚಿತ ಸೇವೆ ನೀಡುತ್ತಿದ್ದಾರೆ.

ಮೂಲತಃ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹುಲ್ಲೂರು ಗ್ರಾಮದ ನಿವಾಸಿಯಾಗಿರುವ ರಮೇಶ ಅವರು ಕಳೆದೆರಡು ವರ್ಷಗಳಿಂದ ಹುಬ್ಬಳ್ಳಿಯಲ್ಲಿ ವಾಸವಾಗಿದ್ದಾರೆ. ಹಲವು ವರ್ಷಗಳಿಂದ ತಮ್ಮ ವಾಹನದಲ್ಲಿ ಸೈನಿಕರಿಗೆ ಉಚಿತ ಸೇವೆ ಒದಗಿಸುತ್ತಿದ್ದಾರೆ. ಭಾರತಾಂಬೆಯ ಸೇವೆ ಸಲ್ಲಿಸುವ ಯೋಧರಿಗೆ ನನ್ನ ಚಿಕ್ಕ ಅಳಿಲು ಸೇವೆ ಇದಯಾಗಿದೆ ಎನ್ನುತ್ತಾರೆ ರಮೇಶ.

ಚಾಲಕನಿಂದ ಯೋಧರಿಗೆ ಉಚಿತ ಸೇವೆ

ತಮ್ಮ ವಾಹನದ ಹಿಂದೆ ಸೈನಿಕರಿಗೆ ಉಚಿತ ಸೇವೆ ಎಂದು ಬರೆಸಿದ್ದು, ಅದರ ಜೊತೆಗೆ ಅವರ ದೂರವಾಣಿ ಸಂಖ್ಯೆ ಕೂಡ ನಮೂದಿಸಿದ್ದಾರೆ. ಸೈನಿಕರು ಯಾವುದೇ ಸಮಯದಲ್ಲಿ ಕೂಡ ಕರೆ ಮಾಡಿ ಉಚಿತ ವಾಹನ ಸೇವೆಯನ್ನು ಪಡೆಯಬಹುದಾಗಿದೆ.

ವಿಮಾನ ನಿಲ್ದಾಣದಲ್ಲಿ ವಾಹನವನ್ನು ನೋಡಿ ಸೈನಿಕರು ಕೇಳಲು ಹಿಂದೇಟು ಹಾಕುತ್ತಾರೆ. ಸ್ವತಃ ರಮೇಶ ಅವರೇ ಹೋಗಿ ಸೈನಿಕರನ್ನು ಕರೆತಂದು ಉಚಿತ ವಾಹನ ಸೇವೆ ನೀಡುತ್ತಾರೆ. ಸೈನಿಕರು ಯಾವುದೇ ಸಂದರ್ಭದಲ್ಲಾದ್ರು ಕೂಡ ಅವರ ವಾಹನದ ಸೇವೆ ಪಡೆಯಬಹುದು.

ABOUT THE AUTHOR

...view details