ಹುಬ್ಬಳ್ಳಿ:ಕೂಲಿ ಕಾರ್ಮಿಕ ಬವಣೆ ಗಮನಿಸಿದ ಹು-ಧಾ ಮಹಾನಗರ ಪಾಲಿಕೆ ಮಾಜಿ ಸದಸ್ಯ ತಿಪ್ಪಣ್ಣ ಮಜ್ಜಗಿ ಉಣಕಲ್ ಕ್ರಾಸ್ ಸ್ಲಂ ಹಾಗೂ ಕಡು ಬಡ ಕುಟುಂಬಗಳಿಗೆ ದಿನನಿತ್ಯದ ಅಗತ್ಯ ವಸ್ತುಗಳನ್ನು ನೀಡಿದರು.
ನಿರಾಶ್ರಿತರಿಗೆ ಆಹಾರ ಧಾನ್ಯ, ಸಾಮಾಜಿಕ ಅಂತರ ಪಾಲಿಸುವಂತೆ ಪಾಲಿಕೆ ಸದಸ್ಯನಿಂದ ಜಾಗೃತಿ - Food grain distribution
ಹು-ಧಾ ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ತಿಪ್ಪಣ್ಣ ಮಜ್ಜಗಿಯವರು ಇಂದು ಉಣಕಲ್ ಕ್ರಾಸ್ ನಿವಾಸಿಗಳಿಗೆ ಸುತ್ತ ಮುತ್ತಲಿನ ಸ್ಲಂ ಹಾಗೂ ಕಡು ಬಡ ಕುಟುಂಬಗಳಿಗೆ ದಿನನಿತ್ಯದ ಅಗತ್ಯ ವಸ್ತುಗಳನ್ನು ನೀಡಿದರು.
ನಿರಾಶ್ರಿತರಿಗೆ ಆಹಾರ ಧಾನ್ಯ ವಿತರಣೆ
ಲಾಕ್ಡೌನ್ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಈ ವೇಳೆ ನಗರದ ನಿವಾಸಿಗಳು ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಬಿಜೆಪಿ ಮುಖಂಡರು ಸಾಮಾಜಿಕ ಕಾರ್ಯಕ್ಕೆ ಮುಂದಾಗಿದ್ದಾರೆ.
ಈ ಸಂದರ್ಭದಲ್ಲಿ ಚಂದ್ರು ಕಿರೇಸೂರ, ಮಂಜುನಾಥ ಹೆಬಸೂರ ಇನ್ನಿತರರು ಉಪಸ್ಥಿತರಿದ್ದರು.