ಕರ್ನಾಟಕ

karnataka

ETV Bharat / state

ಕೇಂದ್ರದಿಂದ ನೆರೆ ಪರಿಹಾರ ಸದ್ಯದಲ್ಲಿಯೇ ಬರಲಿದೆ: ಸಿಎಂ ಬಿ.ಎಸ್​​. ಯಡಿಯೂರಪ್ಪ

ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿಎಂ ಬಿ.ಎಸ್​​. ಯಡಿಯೂರಪ್ಪನವರು ಸದ್ಯದಲ್ಲಿಯೇ ಕೇಂದ್ರದಿಂದ ನೆರೆ ಪರಿಹಾರ ಬರಲಿದೆ. ಬೇರೆ ಅಭಿವೃದ್ದಿ ಕಾರ್ಯಗಳ ಹಣವನ್ನು ಬರ ಪರಿಹಾರಕ್ಕೆ ಬಳಸಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ.

By

Published : Sep 10, 2019, 7:40 PM IST

ಸಿಎಂ ಮತ್ತು ಗೃಹಸಚಿವರು

ಹುಬ್ಬಳ್ಳಿ:ಕೇಂದ್ರದಿಂದ ಇದುವರೆಗೂ ಪರಿಹಾರ ಹಣ ಬಿಡುಗಡೆಯಾಗಿಲ್ಲ. ಸದ್ಯದಲ್ಲಿಯೇ ನೆರೆ ಪರಿಹಾರ ಬರಲಿದೆ ಎಂದು ಮುಖ್ಯಮಂತ್ರಿ ಬಿ.‌ ಎಸ್. ಯಡಿಯೂರಪ್ಪ ಹೇಳಿದ್ದಾರೆ.

ನಗರದ ವಿಮಾನ‌ ನಿಲ್ದಾಣದಲ್ಲಿ ಮಾತನಾಡಿದ ಅವರು, ಬೇರೆ ಅಭಿವೃದ್ದಿ ಕಾರ್ಯಗಳ ಹಣವನ್ನು ಬರ ಪರಿಹಾರಕ್ಕೆ ಬಳಸಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇಂದು ಬೆಳಗಾವಿ ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ‌ ನೀಡಿದ್ದೇನೆ. ಕೂಡಲೇ ನಿರಾಶ್ರಿತರಿಗೆ ಶೆಡ್ಡು ಹಾಕಲು ಸೂಚನೆ ನೀಡಿದ್ದೇನೆ. ಉಮೇಶ ಕತ್ತಿ ವೈಯಕ್ತಿಕ ಕಾರಣದಿಂದ ಭೇಟಿಯಾಗಿಲ್ಲ. ಅವರ ಜೊತೆ ಫೋನ್​​ನಲ್ಲಿ ಮಾತನಾಡಿದ್ದೇನೆ ಎಂದರು.

ನೆರೆ ಪರಿಹಾರ ಸದ್ಯದಲ್ಲಿಯೇ ಬರಲಿದೆ- ಸಿಎಂ

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್​​ ಕಟೀಲ್ ಡಿಕೆಶಿ ಬಂಧನಕ್ಕೆ ಸಿದ್ದರಾಮಯ್ಯ ಕಾರಣ ಎಂಬ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯನವರು ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸಾಮಾನ್ಯ ಜ್ಞಾನವಿಲ್ಲ ಎಂದಿದ್ದರು. ಇದಕ್ಕೆ ನಾನು ಯಾವ ಪ್ರತಿಕ್ರಿಯೆ ನೀಡಲ್ಲ ಎಂದು ಬಿಎಸ್​ವೈ ಹೇಳಿದ್ದಾರೆ.

ಇದೇ ವೇಳೆ ಮಾತನಾಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಪ್ರತಿಭಟನೆ ಮಾಡಲು ಅಭ್ಯಂತರವಿಲ್ಲ. ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿಯಾಗದಂತೆ ಶಾಂತ ರೀತಿ ಪ್ರತಿಭಟನೆ ಮಾಡಿ. ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ.‌ ಪ್ರತಿಪಕ್ಷಗಳಿಗೆ ಡಿಕೆಶಿ ಬಂಧನವನ್ನು ರಾಜಕೀಯ ಮಾಡುವುದು ಹೊಸದೇನಲ್ಲ ಎಂದರು.

ABOUT THE AUTHOR

...view details