ಕರ್ನಾಟಕ

karnataka

By

Published : Jan 21, 2020, 3:19 PM IST

ETV Bharat / state

ವಿಆರ್​​ಎಲ್ ಕಂಪನಿಯ ಗುಜರಿ ವಾಹನಗಳಿಗೆ ಬೆಂಕಿ: ತಪ್ಪಿದ ಭಾರಿ ಅನಾಹುತ

ನಿಲ್ಲಿಸಿದ ಗುಜರಿ ವಾಹನಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಕೆಲ ಬಸ್​​ಗಳ ಮುಂಭಾಗ ಸುಟ್ಟು ಕರಕಲಾಗಿದೆ.

Fire for VR L's scruff vehicles
ವಿಆರ್​​ಎಲ್ ಕಂಪನಿಯ ಸ್ಕ್ರಾಫ್ ವಾಹನಗಳಿಗೆ ಬೆಂಕಿ

ಹುಬ್ಬಳ್ಳಿ:ನಿಲ್ಲಿಸಿದ ಗುಜರಿ ವಾಹನಗಳಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ತಾಲೂಕಿನ ವರೂರ ಬಳಿಯ ವಿಆರ್​ಎಲ್ ಕಂಪನಿ ಆವರಣದಲ್ಲಿ ನಡೆದಿದೆ.

ವಿಆರ್​​ಎಲ್ ಕಂಪನಿಯ ಗುಜರಿ ವಾಹನಗಳಿಗೆ ಬೆಂಕಿ

ಕಂಪನಿಯ ಗುಜರಿ ವಾಹನಗಳನ್ನು ಬೇರೆಯವರಿಗೆ ಟೆಂಡರ್ ಕೊಡಲಾಗುವುದು. ಈ ವೇಳೆ ಕೆಲಸಗಾರರು ವಾಹನಗಳನ್ನು ಸ್ಪಾರ್ಕ್ ಮೂಲಕ ಕಟ್ ಮಾಡಿ ಹೊರಗೆ ಹೋದಾಗ, ಅಲ್ಲಿಯೇ ಬಿದ್ದ ಬೆಂಕಿಯ ತುಣುಕು ಟಯರ್ ಟೂಬ್​​ಗೆ ತಗುಲಿದೆ ಎಂದು ತಿಳಿದು ಬಂದಿದೆ.

ಸಣ್ಣದಾಗಿ ಕಾಣಿಸಿಕೊಡ ಬೆಂಕಿ ಏಕಾಏಕಿ ಬೃಹತ್ ಗಾತ್ರದಲ್ಲಿ ವ್ಯಾಪಿಸಿದೆ. ಘಟನೆಯಲ್ಲಿ ಕೆಲವೊಂದು ಹಳೆಯ ಬಸ್​​ಗಳ ಮುಂಭಾಗ ಸುಟ್ಟು ಕರಕಲಾಗಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ.

ABOUT THE AUTHOR

...view details