ಕರ್ನಾಟಕ

karnataka

ETV Bharat / state

ಧಾರವಾಡದ ಕೋರ್ಟ್​ ಅವರಣದಲ್ಲೇ ಮಾವನ ಮೇಲೆ ಹಲ್ಲೆ ನಡೆಸಿದ ಅಳಿಯ!

ವರದಕ್ಷಿಣೆ ಕಿರುಕುಳದ ಕೇಸ್​ ಹಾಕಿದ್ದಕ್ಕೆ ಕೋಪಗೊಂಡ ಅಳಿಯ ನ್ಯಾಯಾಲಯ ಸಂಕೀರ್ಣದ ಆವರಣದಲ್ಲೇ ಮಾವನ ಮೇಲೆ ಹಲ್ಲೆ ನಡೆಸಿದ ಘಟನೆ ಧಾರವಾಡದಲ್ಲಿ ನಡೆದಿದೆ.

By

Published : Nov 5, 2019, 9:07 PM IST

ಮಾವನ ಮೇಲೆ ಅಳಿಯನಿಂದ ಹಲ್ಲೆ

ಧಾರವಾಡ:ಕೋರ್ಟ್ ಆವರಣದಲ್ಲೇ ಮಾವನ ಮೇಲೆ ಅಳಿಯ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

ತನ್ನ ಮಗಳಿಗೆ ವರದಕ್ಷಿಣೆ ನೀಡುವಂತೆ ಒತ್ತಾಯಿಸಿ ಕಿರುಕುಳ ನೀಡುತ್ತಿದ್ದ ಅಳಿಯನ ವಿರುದ್ಧ ಮಾವವಿನೋದ ಚೌಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಕೇರಳ ಮೂಲದ ಬ್ರುಡಿ ಜಾನ‌್‌ ವಿರುದ್ಧ ವರದಕ್ಷಿಣೆ ತಡೆ ಕಾಯ್ದೆಯಡಿ ಕೇಸ್‌ ಹಾಕಿದ್ದಾರೆ. ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಇವತ್ತು ಕೋರ್ಟ್‌ಗೆ ವಿಚಾರಣೆ ಸಲುವಾಗಿ ಮಗಳ ಜೊತೆಗೆ ಮಾವ ಬಂದಿದ್ದರು. ಇದೇ ವೇಳೆ ಕುಪಿತಗೊಂಡ ಅಳಿಯ ಏಕಾಏಕಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ.

ಮಾವನ ಮೇಲೆ ಅಳಿಯನಿಂದ ಹಲ್ಲೆ

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ವಿನೋದ ಚೌಟಾ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋರ್ಟ್ ಆವರಣದಲ್ಲೇ ಆರೋಪಿಯನ್ನು ಶಹರ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ABOUT THE AUTHOR

...view details