ಕರ್ನಾಟಕ

karnataka

By

Published : Jan 28, 2021, 3:46 PM IST

ETV Bharat / state

ಕೈಯಲ್ಲಿ ವಿಷದ ಬಾಟಲಿ ಹಿಡಿದು ರೈತರ ಪ್ರತಿಭಟನೆ: ಕಾಮಗಾರಿ ನಿಲ್ಲಿಸುವಂತೆ ಆಗ್ರಹ

ಪಿಡಬ್ಲ್ಯೂಡಿ ಇಲಾಖೆ ನಡೆಸುತ್ತಿದ್ದ ಕಾಮಗಾರಿ ಸ್ಥಳದಲ್ಲಿ ರೈತ ಕುಟುಂಬಗಳು ಕೈಯಲ್ಲಿ ವಿಷದ ಬಾಟಲಿ ಹಿಡಿದುಕೊಂಡು ಕಾಮಗಾರಿ ನಿಲ್ಲಿಸುವಂತೆ ಪ್ರತಿಭಟಿಸಿದ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ ನಡೆದಿದೆ.

dsd
ಕೈಯಲ್ಲಿ ವಿಷದ ಬಾಟಲಿ ಹಿಡಿದು ರೈತರ ಪ್ರತಿಭಟನೆ

ಧಾರವಾಡ: ನವಲಗುಂದ ತಾಲೂಕಿನ ತುಪ್ಪದಕುರಹಟ್ಟಿ ಹಾಗೂ ನಾವಳ್ಳಿ ಗ್ರಾಮದ ರೈತರು ಪಿಡಬ್ಲ್ಯೂಡಿ ಇಲಾಖೆಯಿಂದ ಕಲ್​ವಡ್ ನಿರ್ಮಾಣ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿ ಕೈಯಲ್ಲಿ ವಿಷದ ಬಾಟಲಿ ಹಿಡಿದುಕೊಂಡು ಪ್ರತಿಭಟನೆ ನಡೆಸಿದ್ದಾರೆ.

ಕೈಯಲ್ಲಿ ವಿಷದ ಬಾಟಲಿ ಹಿಡಿದು ರೈತರ ಪ್ರತಿಭಟನೆ

ಗ್ರಾಮಗಳ ರೈತರ ಜಮೀನಿನ ಬದಿಯಲ್ಲಿ ನರಗುಂದ - ಗದಗ ರಾಜ್ಯ ಹೆದ್ದಾರಿ ಹಾದು ಹೋಗಿದೆ. ಈಗ ರೈತರ ಜಮೀನುಗಳ ಬದಿಯಲ್ಲಿ ಪಿಡಬ್ಲ್ಯೂಡಿ ಇಲಾಖೆಯಿಂದ ಕಲ್ ವಡ್ ( ಪೂಲ್ ) ನಿರ್ಮಾಣ ಕಾಮಗಾರಿ ಕೈಗೊಂಡಿದೆ.

ಓದಿ:ತಮಿಳಿನ ಆ ಸಿನಿಮಾದಲ್ಲಿ ನಟಿಸಲ್ಲ ಅಂದ್ರಂತೆ ಶಿವಣ್ಣ!

ಇದರಿಂದ ಎತ್ತರದ ಪ್ರದೇಶದಲ್ಲಿನ ನೂರಾರು ಎಕರೆಗಳಲ್ಲಿ ಬಿದ್ದಂತಹ ಮಳೆ ನೀರು ಸುಮಾರು 16 ರೈತರ 55 ಎಕರೆಯಷ್ಟು ಜಮೀನುಗಳಲ್ಲಿ ನುಗ್ಗಿ ಬೆಳೆಗಳನ್ನು ಸಂಪೂರ್ಣವಾಗಿ ನಾಶ ಮಾಡುತ್ತದೆ. ಹೀಗಾಗಿ ಈ ಕಾಮಗಾರಿಯನ್ನು ಈ ಕೂಡಲೇ ನಿಲ್ಲಿಸಬೇಕು. ಇಲ್ಲವಾದಲ್ಲಿ ನಾವು ವಿಷ ಕುಡಿಯಬೇಕಾಗುತ್ತೆ ಎಂದು ರೈತರು ಎಚ್ಚರಿಸಿದ್ದಾರೆ.

ABOUT THE AUTHOR

...view details