ಕರ್ನಾಟಕ

karnataka

ETV Bharat / state

ಇ ಸ್ವತ್ತು ಕಡ್ಡಾಯ: ಸರ್ವರ್ ಸಮಸ್ಯೆಯಿಂದ ಆಸ್ತಿ ಖರೀದಿ ಮಾರಾಟ ವಿಳಂಬ, ಜನ ಹೈರಾಣ

ಹುಧಾ ಮಹಾನಗರ ಪಾಲಿಕೆ ವಿಳಂಬ ಧೋರಣೆ, ಆಸ್ತಿ ಖರೀದಿ ಮಾರಾಟಕ್ಕೆ ಇ ಸ್ವತ್ತು ಕಡ್ಡಾಯಗೊಳಿಸಿ ಡಿಸಿ ಆದೇಶ - ಸರ್ವರ್ ಸಮಸ್ಯೆ ಸಂಕಷ್ಟದಲ್ಲಿ ಸಬ್​ರಿಜಿಸ್ಟ್ರಾರ್ ಕಚೇರಿ ಸಿಬ್ಬಂದಿ, ಪ್ರಮಾಣ ಪತ್ರ ಪಡೆಯಲು ಮನೆ ನಿವೇಶನ ಮಾಲೀಕರು ಪರದಾಟ. ಆಸ್ತಿ ನೋಂದಣಿ ಇನ್ನಿತರ ಕೆಲಸವೂ ವಿಳಂಬ.

By

Published : Mar 10, 2023, 6:14 PM IST

Updated : Mar 10, 2023, 9:41 PM IST

Hudha Mahanagar Corporation
ಹುಧಾ ಮಹಾನಗರ ಪಾಲಿಕೆ

ಇ ಸ್ವತ್ತು ಕಡ್ಡಾಯ

ಹುಬ್ಬಳ್ಳಿ:ಹುಬ್ಬಳ್ಳಿ -ಧಾರವಾಡ ಅವಳಿ ನಗರಗಳು ದಿನದಿಂದ ದಿನಕ್ಕೆ ಬೆಳವಣಿಗೆ ಕಾಣುತ್ತಲೇ ಸಾಗುತ್ತಿವೆ. ಅದರಂತೆ ಆಸ್ತಿ ಖರೀದಿ ಹಾಗೂ ಮಾರಾಟ ಪ್ರಕ್ರಿಯೆ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಾಗಿದೆ. ಆದರೆ ತಮ್ಮ ಆಸ್ತಿಗೆ ತಾನೇ ವಾರಸುದಾರರು ಎಂಬ ಸರ್ಟಿಫಿಕೆಟ್ ಪಡೆಯಲು ಮನೆ ಹಾಗೂ ನಿವೇಶನ ಮಾಲೀಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಪಾರದರ್ಶಕತೆ ಹಾಗೂ ವಂಚನೆ ತಪ್ಪಿಸಲು ಆಸ್ತಿ ಖರೀದಿ ಹಾಗೂ ಮಾರಾಟಕ್ಕೆ ಇ-ಸ್ವತ್ತು (ಇ-ಆಸ್ತಿ ) ಕಡ್ಡಾಯ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಒಂದೆಡೆ ಮಹಾನಗರ ಪಾಲಿಕೆ ವಿಳಂಬ ಧೋರಣೆ, ಮತ್ತೊಂದೆಡೆ ಸರ್ವರ್ ಸಮಸ್ಯೆಯಿಂದ ಸಬ್​ರಿಜಿಸ್ಟ್ರಾರ್ ಕಚೇರಿಯ ಸಿಬ್ಬಂದಿ, ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇ ಆಸ್ತಿ ಅಥವಾ ಇ ಸ್ವತ್ತು ಪ್ರಮಾಣ ಪತ್ರ ಕಡ್ಡಾಯ ಮಾಡಿರುವ ಸಂಬಂಧ ಅಧಿಕಾರಿಗಳು ರಾತ್ರೋ ರಾತ್ರಿ ಕೈಗೊಂಡ ದಿಢೀರ್ ನಿರ್ಧಾರದ ಪರಿಣಾಮ ಜನರು ಇನ್ನಿಲ್ಲದ ಸಮಸ್ಯೆ ಎದುರಿಸುತ್ತಿದ್ದಾರೆ.

ಇ ಸ್ವತ್ತುಗೆ ಅಲೆದಾಡಿ ಜನ ಸುಸ್ತು ಸುಸ್ತು: ಇ ಸ್ವತ್ತು ಪ್ರಮಾಣಪತ್ರ ಇದ್ದವರಿಗೆ ಮಾತ್ರ ಆಸ್ತಿ ನೋಂದಣಿ ಮಾಡಬೇಕೆಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದು, ಆದೇಶ ನೀಡಿದ ಮಾರನೇ ದಿನ ಸಬ್​ರಿಜಿಸ್ಟ್ರಾರ್​ ಕಚೇರಿಯಲ್ಲಿ ಅನುಷ್ಠಾನಕ್ಕೆ ತರಲಾಗಿದೆ. ಆದ್ರೆ ಸರ್ವರ್ ಸಮಸ್ಯೆಯಿಂದ ಆಸ್ತಿ ನೋಂದಣಿ ಹಾಗೂ ಇತರ ಕೆಲಸಗಳು ವಿಳಂಬ ಆಗುತ್ತಿವೆ. ಬ್ಯಾಂಕ್ ಲೋನ್‌ಗಾಗಿ ಆಸ್ತಿ ಮೇಲೆ ಭೋಜಾ ಕೂಡಿಸಲು, ಭೋಜಾ ಹೆಸರು ಕಡಿಮೆ ಮಾಡಿಸಲು ಹೀಗೆ ಹಲವಾರು ರೀತಿಯ ನೋಂದಣಿ ಪ್ರಕ್ರಿಯೆಗಳು ಸಬ್​ರಿಜಿಸ್ಟ್ರಾರ್ ಕಚೇರಿಯಲ್ಲಿ ನಿತ್ಯವೂ ನಡೆಯುತ್ತ ಇರುತ್ತವೆ. ಭೋಜಾ ಕೂಡಿಸಲು, ಕಡಿಮೆ ಮಾಡಲು ಇ ಆಸ್ತಿ ಅವಶ್ಯಕತೆ ಇಲ್ಲ ಎಂದು ಕೆಲವರು ಹೇಳುತ್ತಾರೆ. ಅದಕ್ಕೂ ಪ್ರಮಾಣಪತ್ರ ಕೇಳುತ್ತಿರುವುದು ಜನರಲ್ಲಿ ತಲೆನೋವಾಗಿ ಪರಿಣಮಿಸಿದೆ.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ವಲಯ ಕಚೇರಿಗಳಲ್ಲಿ ಇ ಸ್ವತ್ತಿಗಾಗಿ ಬಹಳಷ್ಟು ಜನರು ಅರ್ಜಿ ಸಲ್ಲಿಸಿದ್ದಾರೆ. ಇದುವರೆಗೂ ಪ್ರಮಾಣ ಪತ್ರ ಲಭಿಸಿಲ್ಲ. ಇಂಥ ನೂರಾರು ಜನರು ಅರ್ಜಿ ಸಲ್ಲಿಸಿ ತಿಂಗಳುಗಳಾಗಿವೆ. ಪ್ರಮಾಣ ಪತ್ರಕ್ಕೆ ಅಲೆದಾಡಿ ಸಾಕಾಗಿ ಕೈ ಚೆಲ್ಲಿ ಕುಳಿತಿದ್ದಾರೆ.

ಇ ಸ್ವತ್ತು ಬಳಕೆ ವಂಚನೆಗೆ ತಡೆ: ಇ-ಸ್ವತ್ತು ಕಡ್ಡಾಯದ ಹಿಂದೆ ಸಾರ್ವಜನಿಕ ಕಾಳಜಿ ಇದೆ ಎನ್ನುವುದು ಹು ಧಾ ಮಹಾನಗರ ಪಾಲಿಕೆ ಆಯುಕ್ತ ಡಾ ಗೋಪಾಲಕೃಷ್ಣ ಅವರ ಅಭಿಪ್ರಾಯ. ನಗರ ಪ್ರದೇಶಗಳಲ್ಲಿ ಉತಾರ ಬಳಸುವದಿಂದ ಮೋಸ ಹೋಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಇ ಸ್ವತ್ತು ಸಾರ್ವಜನಿಕರು ಕಡ್ಡಾಯವಾಗಿ ಪಡೆಯುವದು ಉತ್ತಮ. ಇದರಿಂದ ತಮ್ಮ ಆಸ್ತಿಯ ನಿಜವಾದ ದಾಖಲೆ ಇಟ್ಟುಕೊಂಡಂತಾಗುತ್ತದೆ ಎನ್ನುತ್ತಾರೆ.

ಇಸ್ವತ್ತು ವಿಳಂಬಕ್ಕೆ ಸರ್ವರ್ ಸಮಸ್ಯೆ:ಇನ್ನು ವಿಳಂಬದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಒಂದು ವಾರದೊಳಗೆ ಇಸ್ವತ್ತು ಕೊಡಿಸುವ ವ್ಯವಸ್ಥೆ ಮಾಡಲಾಗಿದೆ. ಮಹಾನಗರ ಪಾಲಿಕೆಯ ಎಲ್ಲಾ ವಲಯ ಕಚೇರಿಗಳಲ್ಲಿ ಪ್ರತ್ಯೇಕ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.

ಅವಶ್ಯಕತೆ ಅನುಗುಣವಾಗಿ ಪುರುಷ ಸಿಬ್ಬಂದಿ ಹೆಚ್ಚುವರಿ ಸಮಯದಲ್ಲಿ ಕೆಲಸ ಮಾಡಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಇಸ್ವತ್ತು ಕೊಡುವ ಕಾರ್ಯದಲ್ಲಿ ತೊಡಗಿದ್ದಾರೆ. ಇಡೀ ರಾಜ್ಯದ ಏಕಕಾಲಕ್ಕೆ ಒಂದೇ ಸರ್ವರ್ ಬಳಸುವುದರಿಂದ ಸರ್ವರ್ ಸಮಸ್ಯೆಯೂ ಇದೆ. ಅದಕ್ಕೆ ಪರ್ಯಾಯ ವ್ಯವಸ್ಥೆಯ ಭರವಸೆ ನೀಡಿದ್ದಾರೆ.

ಇದನ್ನೂಓದಿ:ಮಹೇಶ್​ ಕುಮಟಳ್ಳಿಗೆ ಟಿಕೆಟ್ ನೀಡದಿದ್ದರೆ ನಾನು ಚುನಾವಣೆಗೆ ಸ್ಪರ್ಧಿಸಲ್ಲ: ರಮೇಶ್​ ಜಾರಕಿಹೊಳಿ

Last Updated : Mar 10, 2023, 9:41 PM IST

ABOUT THE AUTHOR

...view details