ಕರ್ನಾಟಕ

karnataka

ETV Bharat / state

ನಮಗೂ ಸಹಾಯಧನ ನೀಡಿ: ಜಿಲ್ಲಾ ಅರ್ಚಕ ಪುರೋಹಿತ ಜಂಗಮಾಭಿವೃದ್ಧಿ ಸಂಘದಿಂದ ಮನವಿ - ಡಿಸಿಗೆ ಮನವಿ ಸಲ್ಲಿಸಿದ ಜಿಲ್ಲಾ ಅರ್ಚಕ ಪುರೋಹಿತ ಜಂಗಮಾಭಿವೃದ್ದಿ ಸಂಘ...

ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಸಂಘದ ಸದಸ್ಯರು ಲಾಕ್​ಡೌನ್​​​​​ ಹಿನ್ನೆಲೆ ಜೀವನ ನಡೆಸುವುದು ದುಸ್ತರವಾಗಿದೆ. ಈ‌ ಕಾರಣ ಸರ್ಕಾರ ನಮಗೂ ಸಹಾಯಧನ ನೀಡಬೇಕು ಎಂದು ಮನವಿ ಮಾಡಿಕೊಂಡರು.

District  priest association appeal to dc deepa cholan at dharwada
ಡಿಸಿಗೆ ಮನವಿ ಸಲ್ಲಿಸಿದ ಜಿಲ್ಲಾ ಅರ್ಚಕ ಪುರೋಹಿತ ಜಂಗಮಾಭಿವೃದ್ದಿ ಸಂಘ....

By

Published : May 12, 2020, 5:23 PM IST

ಧಾರವಾಡ:ಲಾಕ್​ಡೌನ್​​​ ಹಿನ್ನೆಲೆ ಅರ್ಚಕ ಹಾಗೂ ಪುರೋಹಿತರಿಗೆ ಸಹಾಯಧನ ನೀಡುವಂತೆ ಆಗ್ರಹಿಸಿ ಜಿಲ್ಲಾ ಅರ್ಚಕ ಪುರೋಹಿತ ಜಂಗಮಾಭಿವೃದ್ಧಿ ಸಂಘದಿಂದ ಜಿಲ್ಲಾಧಿಕಾರಿ ದೀಪಾ‌ ಚೋಳನ್​​ ಅವರಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಸಂಘದ ಸದಸ್ಯರು, ಲಾಕ್​ಡೌನ್​​​​​ ಹಿನ್ನೆಲೆ ಜೀವನ ನಡೆಸುವುದು ದುಸ್ತರವಾಗಿದೆ. ಈ‌ ಕಾರಣ ಸರ್ಕಾರ ನಮಗೂ ಸಹಾಯಧನ ನೀಡಬೇಕು ಎಂದು ಮನವಿ ಮಾಡಿಕೊಂಡರು.

ಜಿಲ್ಲೆಯ ಅರ್ಚಕರು, ಪುರೋಹಿತರು ಸಮಾಜದಲ್ಲಿ ನಡೆಯುವ ಧಾರ್ಮಿಕ‌ ಕಾರ್ಯಕ್ರಮಗಳನ್ನು ಅವಲಂಬಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ‌ಲಾಕ್​ಡೌನ್​ ಹಿನ್ನೆಲೆ ಮಠ, ಮಂದಿರ, ಧಾರ್ಮಿಕ ‌ಕೇಂದ್ರಗಳು, ಪೂಜಾ ಕಾರ್ಯಕ್ರಮಗಳು ಸಂಪೂರ್ಣ ಬಂದ್ ಆಗಿರುವ ಕಾರಣ ಜೀವನ ನಡೆಸಲು ತೊಂದರೆಯಾಗುತ್ತಿದೆ. ಸರ್ಕಾರ ಸಹಾಯಧನ ನೀಡಿ‌ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details