ಕರ್ನಾಟಕ

karnataka

ಅಕ್ರಮ ಕಟ್ಟಡ ಕಟ್ಟಿಕೊಂಡವರಿಗೆ ಬಿಸಿ ಮುಟ್ಟಿಸಲು ಮುಂದಾದ ಹು-ಧಾ ಮಹಾನಗರ ಪಾಲಿಕೆ

By

Published : Mar 29, 2021, 3:48 PM IST

ಜಿಲ್ಲಾಡಳಿತದ ಆದೇಶದಂತೆ, ಈಗಾಗಲೇ ಪಾಲಿಕೆ ಆಸ್ತಿಯಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ ಮಾಡಿಕೊಂಡಿರುವವರು ಹಾಗೂ ಲೀಸ್ ಅವಧಿ ಮುಗಿದಿರುವ ಪಾಲಿಕೆ ಆಸ್ತಿ ಗುರುತಿಸಿ ನೋಟಿಸ್ ನೀಡುವ ಕಾರ್ಯ ನಡೆಯುತ್ತಿದೆ..

Dharwad DC directs HDMC to clearance of Illegal Buildings
ಅಕ್ರಮ ಕಟ್ಟಡ ತೆರವಿಗೆ ಧಾರವಾಡ ಜಿಲ್ಲಾಧಿಕಾರಿ ಸೂಚನೆ

ಹುಬ್ಬಳ್ಳಿ :ಪಾಲಿಕೆ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ಕಟ್ಟಿಕೊಂಡಿರುವ ಹಾಗೂ ಲೀಸ್ ಅವಧಿ ಮುಗಿದರೂ ಪಾಲಿಕೆ ಆಸ್ತಿ ಬಳಕೆ ಮಾಡಿಕೊಂಡವರಿಗೆ ಬಿಸಿ ಮುಟ್ಟಿಸಲು ಜಿಲ್ಲಾಡಳಿತದ ನೇತೃತ್ವದಲ್ಲಿ ಹು-ಧಾ ಮಹಾನಗರ ಪಾಲಿಕೆ ಮುಂದಾಗಿದೆ.

ಹುಬ್ಬಳ್ಳಿ- ಧಾರವಾಡ ನಗರದಲ್ಲಿ ಫುಟ್‌ಪಾತ್ ತೆರವು ಕಾರ್ಯಾಚರಣೆ ಹಾಗೂ ಪಾರ್ಕಿಂಗ್ ಕಾರ್ಯಾಚರಣೆ ಬಳಿಕ ಇದೀಗ ಜಿಲ್ಲಾಡಳಿತ ಮತ್ತೊಂದು ಪ್ರಯತ್ನಕ್ಕೆ ಕೈ ಹಾಕಿದೆ. ಪಾಲಿಕೆ ಆಸ್ತಿಯಲ್ಲಿ ಮನೆ ಹಾಗೂ ಇನ್ನಿತರ ಕಟ್ಟಡಗಳನ್ನು ಕಟ್ಟಿಕೊಂಡಿರುವ ಹಾಗೂ ಲೀಸ್ ಅವಧಿ ಮುಗಿದರೂ, ಉಪಯೋಗಿಸುತ್ತಿರುವ ಆಸ್ತಿಗಳನ್ನು ಗುರುತಿಸಿ, ಸಂಬಂಧಪಟ್ಟವರಿಗೆ ನೋಟಿಸ್​ ನೀಡುವಂತೆ ಜಿಲ್ಲಾಡಳಿತ ಪಾಲಿಕೆಗೆ ಸೂಚಿಸಿದೆ.

ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್

ಓದಿ : ಕಂದಾಯ ಸಚಿವ ಅಶೋಕ್‌ ಛಬ್ಬಿ ಗ್ರಾಮ ವಾಸ್ತವ್ಯ ಮಾಡಿದ್ರೂ ಪರಿಹಾರ ಕಾಣದ ಸಮಸ್ಯೆಗಳು..

ಜಿಲ್ಲಾಡಳಿತದ ಆದೇಶದಂತೆ, ಈಗಾಗಲೇ ಪಾಲಿಕೆ ಆಸ್ತಿಯಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ ಮಾಡಿಕೊಂಡಿರುವವರು ಹಾಗೂ ಲೀಸ್ ಅವಧಿ ಮುಗಿದಿರುವ ಪಾಲಿಕೆ ಆಸ್ತಿ ಗುರುತಿಸಿ ನೋಟಿಸ್ ನೀಡುವ ಕಾರ್ಯ ನಡೆಯುತ್ತಿದೆ.

For All Latest Updates

ABOUT THE AUTHOR

...view details