ಧಾರವಾಡ:ಇಲ್ಲಿನ ಕೆಲಗೇರಿಯ ಗಾಯತ್ರಿಪುರದ ಪರಿಸರಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ವಿಜಯ್ ಅವರ ಭಾವಚಿತ್ರವನ್ನು ರಂಗೋಲಿ ಬಿಡಿಸುವ ಮೂಲಕ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದರು.
ಚಿತ್ರನಟ ವಿಜಯ್ಗೆ ಧಾರವಾಡ ಕಲಾವಿದನ 'ಕಲಾ ಶ್ರದ್ಧಾಂಜಲಿ' - ಧಾರವಾಡ
ಸಂಚಾರಿ ವಿಜಯ್ ಅವರ ಭಾವಚಿತ್ರವನ್ನು ರಂಗೋಲಿ ಬಿಡಿಸುವ ಮೂಲಕ ಧಾರವಾಡದಲ್ಲಿ ಕಲಾವಿದರೊಬ್ಬರು ವಿಶೇಷ ರೀತಿಯಲ್ಲಿ ಕಲಾ ಶ್ರದ್ಧಾಂಜಲಿ ಸಲ್ಲಿಸಿದರು.

ಧಾರವಾಡ ಕಲಾವಿದ
ಚಿತ್ರನಟ ವಿಜಯ್ ನಿಧನಕ್ಕೆ ಕಲಾವಿದನಿಂದ ರಂಗೋಲಿ ಶ್ರದ್ಧಾಂಜಲಿ
ಕೊರೊನಾ ಸಂದಿಗ್ಧ ಸ್ಥಿತಿಯಲ್ಲಿ ಜನಸೇವೆಯಲ್ಲಿ ತೊಡಗಿಕೊಂಡಿದ್ದ ವಿಜಯ್ ಅನೇಕ ಜನಪರ ಕೆಲಸಗಳನ್ನು ಮಾಡುತ್ತಿದ್ದರು. ಬೈಕ್ ಅಪಘಾತದಲ್ಲಿ ಅವರ ಮೆದುಳಿಗೆ ಗಂಭೀರ ಗಾಯವಾದ ಪರಿಣಾಮ ಇಂದು ನಿಧನ ಹೊಂದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರು ಪ್ರಾರ್ಥಿಸಿದ್ದಾರೆ.
ಇದನ್ನೂ ಓದಿ:ರವೀಂದ್ರ ಕಲಾಕ್ಷೇತ್ರದಲ್ಲಿ ವಿಜಯ್ ಪಾರ್ಥಿವ ಶರೀರದ ಅಂತಿಮ ದರ್ಶನ: ಸಂಜೆ ಹುಟ್ಟೂರಲ್ಲಿ ಅಂತ್ಯಸಂಸ್ಕಾರ
Last Updated : Jun 15, 2021, 9:11 AM IST