ಕರ್ನಾಟಕ

karnataka

ETV Bharat / state

ಐಯ್‌ ನನ್‌ ಶಿವ್ನಾ, ಈ ಬಸ್ ಇಲ್ದಂಗಾಗಿ ಮಾವನ ಮಣ್ಣಿಗೂ ಹೋಗೋಕಾಗವಲ್ದು.. - transport staffs strike news

ಸಾರಿಗೆ ಸಂಸ್ಥೆಗಳ ಬಸ್ ಬಂದ್ ಹಿನ್ನೆಲೆಯಲ್ಲಿ ಬಡ-ಮಧ್ಯಮ‌ ವರ್ಗದ ಜನರು ‌ಸಾಕಷ್ಟು ತೊಂದರೆ ‌ಅನುಭವಿಸುತ್ತಿದ್ದಾರೆ..

transport staffs strike news
ಮಾವನ ಅಂತ್ಯಸಂಸ್ಕಾರಕ್ಕೆ ಹೋಗಲು ಸೊಸೆಯ ಪರದಾಟ

By

Published : Dec 13, 2020, 9:36 AM IST

Updated : Dec 13, 2020, 9:42 AM IST

ಹುಬ್ಬಳ್ಳಿ :ಮಹಿಳೆಯೊಬ್ಬರು ತಮ್ಮ ಮಾವನ ಅಂತ್ಯ ಸಂಸ್ಕಾರಕ್ಕೆ ಹೋಗಲು ಸಾಧ್ಯವಾಗದೇ ಹುಬ್ಬಳ್ಳಿಯ ಹಳೆಯ ಬಸ್ ನಿಲ್ದಾಣದಲ್ಲಿ ಕಣ್ಣೀರು ಹಾಕಿದ ಘಟನೆ ನಡೆದಿದೆ.

ಮಾವನ ಅಂತ್ಯಸಂಸ್ಕಾರಕ್ಕೆ ಹೋಗಲು ಸೊಸೆಯ ಪರದಾಟ..
ಮೂಲತಃ ಕೊಪ್ಪಳದ ಕುಷ್ಟಗಿ ಮೂಲದ ದೇವಮ್ಮ ಎಂಬ ಮಹಿಳೆ‌ ಕೂಲಿ‌ ಕೆಲಸಕ್ಕೆಂದು ಮಂಗಳೂರಿನಲ್ಲಿ ವಾಸವಾಗಿದ್ದರು. ಆದ್ರೆ, ಅವರ ಮಾವ ಮೃತಪಟ್ಟಿರುವ ಸುದ್ದಿ‌ ಕೇಳಿ ಐದು ವರ್ಷದ ‌ಮಗುವಿನೊಂದಿಗೆ ಮಂಗಳೂರಿನಿಂದ ಬಸ್​ನಲ್ಲಿ ಹುಬ್ಬಳ್ಳಿಗೆ ನಿನ್ನೆ ಸಾಯಂಕಾಲ ಬಂದು ಇಳಿದಿದ್ದಾರೆ.
ಆದ್ರೆ, ಸಾರಿಗೆ ಸಿಬ್ಬಂದಿ ಮುಷ್ಕರ ಇರುವುದರಿಂದ ಕೊಪ್ಪಳದ ಕಡೆ ಯಾವುದೇ ಬಸ್ ವ್ಯವಸ್ಥೆ ಇಲ್ಲ. ಹೀಗಾಗಿ ಹಳೇ ಬಸ್ ನಿಲ್ದಾಣದಲ್ಲಿ ತನ್ನ ಐದು ವರ್ಷ ಹೆಣ್ಣು ಮಗು ಜೊತೆ ಪರದಾಡುತ್ತಿದ್ದಾರೆ.
ಸದ್ಯ ಕುಷ್ಟಗಿಗೆ ಹೋಗಲು ಬಸ್ ಇಲ್ಲದೆ, ಖಾಸಗಿ ವಾಹನಗಳಿಗೆ ದುಪ್ಪಟ್ಟು ಹಣ‌ ಕೊಡಲು ಅಷ್ಟೊಂದು ಹಣವಿಲ್ಲದೇ ದೇವಮ್ಮ ಕಂಗಾಲಾಗಿ ಬಸ್ ನಿಲ್ದಾಣದಲ್ಲಿ ‌ಕುಳಿತಿದ್ದಾರೆ.
Last Updated : Dec 13, 2020, 9:42 AM IST

ABOUT THE AUTHOR

...view details