ಕರ್ನಾಟಕ

karnataka

ETV Bharat / state

ಜಾತ್ರೆಗೆ ಬಂದು 'ಲಾಕ್'​​ ಆದ ಅಮ್ಯೂಸ್​​ಮೆಂಟ್​​ ಪಾರ್ಕ್​ ಕಲಾವಿದರು: ಉದ್ಯೋಗವಿಲ್ಲದೇ ಪರದಾಟ

ಕೊರೊನಾ ಲಾಕ್​ಡೌನ್​ ಹಿನ್ನೆಲೆ ಜಾತ್ರೆಗಳು ನಡೆಯದ ಕಾರಣ ಹೊರರಾಜ್ಯದಿಂದ ಬಂದಿದ್ದ ಅಮ್ಯೂಸ್​​ಮೆಂಟ್​​ ಪಾರ್ಕ್ ಕೆಲಸಗಾರರು, ಕಲಾವಿದರು ಕೆಲಸವಿಲ್ಲದೇ ಜೀವನ ಸಾಗಿಸಲು ಪರಿತಪಿಸುವಂತಾಗಿದೆ.

By

Published : Sep 27, 2020, 12:14 AM IST

Coronavirus  effect on  the amusement park industry
ಉದ್ಯೋಗವಿಲ್ಲದೆ ಪರದಾಟ

ಹುಬ್ಬಳ್ಳಿ:ಕೊರೊನಾ ಉಲ್ಬಣಿಸಿದ ಹಿನ್ನೆಲೆ ದೇಶಾದ್ಯಂತ ಲಾಕ್​ಡೌನ್​ ಮಾಡಲಾಗಿತ್ತು. ಆದರೆ ಈ ವೇಳೆಗಾಗಲೇ ಉತ್ತರ ಪ್ರದೇಶದ ಅಮ್ಯೂಸ್​​ಮೆಂಟ್​​ ಪಾರ್ಕ್​ನ ಕೆಲಸಗಾರರು ಹಾಗೂ ಜಾದುಗಾರ ಕಲಾವಿದರು ಕಲಘಟಗಿ ಜಾತ್ರೆಗೆ ಬಂದಿದ್ರು. ಹೀಗಾಗಿ ಲಾಕ್​​ಡೌನ್​ಗೆ ಸಿಲುಕಿ ಈಗ ಉದ್ಯೋಗವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಉದ್ಯೋಗವಿಲ್ಲದೇ ಪರದಾಟ

ಉತ್ತರ ಕರ್ನಾಟಕದ ‌ದೊಡ್ಡ ಜಾತ್ರೆಗಳಲ್ಲಿ ಒಂದಾದ ಕಲಘಟಗಿ ಶ್ರೀ ಗ್ರಾಮದೇವಿ‌ ಜಾತ್ರೆಗೆ ಮಾರ್ಚ್​​ ತಿಂಗಳಲ್ಲಿ ಆಗಮಿಸಿದ್ದ ಅಮ್ಯೂಸ್​​ಮೆಂಟ್​​ ಪಾರ್ಕ್​ನ ಕೆಲಸಗಾರರು ಮತ್ತು ಜಾದುಗಾರ ಕಲಾವಿದರು ಲಾಕ್​ಡೌನ್ ಕಾರಣ ಕಲಘಟಗಿಯಲ್ಲಿ ಉಳಿದುಕೊಂಡಿದ್ದರು. ಆದರೆ, ಈಗ ಅವರಿಗೆ ಉದ್ಯೋಗ ಇಲ್ಲದೇ ಜೀವನ‌ ನಡೆಸುವುದೇ ಕಷ್ಟವಾಗಿದೆ.

ಸುಮಾರು ಮೂವತ್ತು ಅಮ್ಯೂಸ್​​ಮೆಂಟ್ ಕೆಲಸಗಾರರು, ಕಲಾವಿದರು ತಮ್ಮ ಕುಟುಂಬಗಳೊಂದಿಗೆ ಕಲಘಟಗಿಯಲ್ಲಿಯೆ ಗುಡಿಸಲು ಹಾಕಿ ಉಳಿಯ ಬೇಕಾದ ಪ್ರಸಂಗ ‌ಬಂದೊದಗಿದೆ. ಕಳೆದ ಆರು ತಿಂಗಳಿಂದ ಜಾತ್ರೆಗಳು ನಡೆಯದ ಕಾರಣ, ಪ್ರದರ್ಶನಗಳು ಇಲ್ಲದೇ ಕಂಗಲಾಗಿದ್ದಾರೆ. ಇನ್ನೂ ಲಾಕ್​ಡೌನ್ ನಿಂದ ಜೀವನ‌ ಕಷ್ಟವಾಗಿದ್ದು, ಸಾಮಗ್ರಿಗಳನ್ನು ಸಾಗಿಸಲು ಆಗದೇ ಉಳಿದಿದ್ದೇವೆ. ಹೀಗಾಗಿ ಸರ್ಕಾರ ಸಹಾಯ ಮಾಡಬೇಕು ಎಂದು ಜಾದುಗಾರ ಕಲಾವಿದರು ಮನವಿ ಮಾಡಿದ್ದಾರೆ.

ABOUT THE AUTHOR

...view details