ಕರ್ನಾಟಕ

karnataka

By

Published : Sep 9, 2020, 9:27 PM IST

ETV Bharat / state

ಮಹಾಮಾರಿ ಹೊಡೆತಕ್ಕೆ ಚಿಂದಿ ಆಯುವವರ ಬದುಕು ಛಿದ್ರ!

ಮಹಾಮಾರಿ ಕೊರೊನಾದಿಂದ ಚಿಂದಿ ಆಯುವವರ ಬದುಕು ಸಹ ಛಿದ್ರವಾಗಿದೆ. ಚಿಂದಿ ಆಯ್ದ ಹಣದಲ್ಲಿ ಸಂಸಾರ ಸಾಗಿಸುತ್ತಿದ್ದ ಕುಟುಂಬಗಳು ಈಗ ಸಂಕಷ್ಟಕ್ಕೆ ಸಿಲುಕಿವೆ.

Corona effect on Rag pickers, Corona effect on Rag pickers life, Corona effect on Rag pickers life in Hubli, ಚಿಂದಿ ಆಯುವವರ ಬದುಕು ಛಿದ್ರ, ಚಿಂದಿ ಆಯುವವರ ಬದುಕು ಛಿದ್ರಗೊಳಿಸಿದ ಕಿಲ್ಲರ್ ಕೊರೊನಾ, ಹುಬ್ಬಳ್ಳಿಯಲ್ಲಿ ಚಿಂದಿ ಆಯುವವರ ಬದುಕು ಛಿದ್ರ,
ಚಿಂದಿ ಆಯುವವರ ಬದುಕು ಛಿದ್ರಗೊಳಿಸಿದ ಕಿಲ್ಲರ್ ಕೊರೊನಾ

ಹುಬ್ಬಳ್ಳಿ: ಚಿಂದಿ ಆಯ್ದರು ಕೂಡ ಉತ್ತಮ ಜೀವನ ನಡೆಸುತ್ತಿದ್ದವರ ಬದುಕು ಕೊರೊನಾದಿಂದ ಛಿದ್ರವಾಗಿವೆ.‌ ಇವರು ಕಿಲ್ಲರ್ ಕೊರೊನಾದಿಂದ ಸಾಕಷ್ಟು ಸಮಸ್ಯೆಗಳನ್ನು ಹೊತ್ತು ಕುಟುಂಬ ನಿರ್ವಹಣೆಯಿಂದ ತತ್ತರಿಸಿ ಹೋಗಿದ್ದಾರೆ.

ಚಿಂದಿ ಆಯುವವರ ಬದುಕು ಛಿದ್ರಗೊಳಿಸಿದ ಕಿಲ್ಲರ್ ಕೊರೊನಾ

ಬೀದಿ ಬದಿಯ ಕಸದಲ್ಲಿ ನಿರುಪಯುಕ್ತ ವಸ್ತುಗಳನ್ನು ಆಯ್ದು ಹೆಂಡತಿ, ಮಕ್ಕಳನ್ನು ಸಾಕುವ ಮೂಲಕ ಜೀವನ ನಡೆಸುತ್ತಿದ್ದ ಕಡು ಬಡತನದ ಕುಟುಂಬಕ್ಕೆ ಕೊರೊನಾ ಕರಿನೆರಳು ಬಿದ್ದಿದೆ. ಕಸದಲ್ಲಿಯೇ ತುತ್ತು ಅನ್ನ ಕಾಣುತ್ತಿದ್ದ ಹಲವು ಕುಟುಂಬಗಳು ನರಕಯಾತನೆ ಅನುಭವಿಸುತ್ತಿವೆ.

ಚಿಂದಿ ಆಯುವವರ ಬದುಕು ಛಿದ್ರಗೊಳಿಸಿದ ಕಿಲ್ಲರ್ ಕೊರೊನಾ

ಕೋವಿಡ್ ಪೂರ್ವದಲ್ಲಿ ಪ್ಲಾಸ್ಟಿಕ್ ಬಾಟಲ್ ಸೇರಿದಂತೆ ಹಲವು ನಿರುಪಯುಕ್ತ ವಸ್ತುಗಳನ್ನು ಹುಡುಕಿ ಗುಜರಿಗೆ ಹಾಕಿ ನಿತ್ಯ ಜೀವನ ನಿರ್ವಹಣೆ ಮಾಡುವಷ್ಟು ಹಣ ಸಂಪಾದನೆ ಮಾಡುತ್ತಿದ್ದರು. ಅಂದಿನ ಗಂಜಿಯನ್ನು ಸಂಪಾದಿಸುತ್ತಿದ್ದ ಇಂತಹ ಬಹುತೇಕ ಕುಟುಂಬಕ್ಕೆ ಕೊರೊನಾ ವೈರಸ್ ಬಂದು ಕೆಲಸ ಕಾರ್ಯ ಹಾಗೂ ಹೊತ್ತಿನ ಗಂಜಿಯನ್ನು ಕಸಿದುಕೊಂಡಿದೆ.

ಚಿಂದಿ ಆಯುವವರ ಬದುಕು ಛಿದ್ರಗೊಳಿಸಿದ ಕಿಲ್ಲರ್ ಕೊರೊನಾ

ದುಡಿದು ಜೀವನ ನಡೆಸುತ್ತಿದ್ದ ಚಿಂದಿ ಆಯುವ ಕುಟುಂಬಕ್ಕೆ ದೊಡ್ಡಮಟ್ಟದ ಹೊಡೆತವನ್ನು ಕೊಟ್ಟಿದೆ. ವಾಣಿಜ್ಯನಗರಿಯತ್ತ ತ್ಯಾಜ್ಯ ಕಸದಲ್ಲಿ ಬದುಕು ಕಟ್ಟಿಕೊಳ್ಳಲು ಬಂದ ಬಹುತೇಕ ಕುಟುಂಬಗಳು ಸಣ್ಣಪುಟ್ಟ ಮಕ್ಕಳನ್ನು ಸಾಕುವುದು ಕೂಡ ದುಸ್ತರವಾಗಿದೆ. ಒಟ್ಟಿನಲ್ಲಿ ಚಿಂದಿ ಆಯುವ ಕುಟುಂಬವನ್ನು ಕೊರೊನಾ ಮಹಾಮಾರಿ ಛಿದ್ರಗೊಳಿಸಿದೆ.

ABOUT THE AUTHOR

...view details