ಹುಬ್ಬಳ್ಳಿ: ಕೊರೊನಾ ವೈರಸ್ ಭೀತಿ ಹಿನ್ನೆಲೆ ಎಚ್ಚೆತ್ತುಕೊಂಡ ನೈರುತ್ಯ ರೈಲ್ವೆ ಇಲಾಖೆ ಹೊಸ ನಿರ್ಧಾರವನ್ನು ಕೈಗೊಂಡಿದೆ.
ಕೊರೊನಾ ಭೀತಿ: ನೈರುತ್ಯ ರೈಲ್ವೆ ಇಲಾಖೆಯಿಂದ ಹೊಸ ನಿರ್ಧಾರ - ಬೆಡ್ ಶೀಟ್ ತೆರವಿಗೆ ಸೂಚನೆ
ಕೊರೊನಾ ಹರಡುವ ಭೀತಿ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ನೈರುತ್ಯ ರೈಲ್ವೆ ಇಲಾಖೆ, ರೈಲ್ವೆ ಇಲಾಖೆ ಎಸಿ ಕೋಚ್ನ ವಿಂಡೋ ಕರ್ಟನ್, ಬೆಡ್ ಶೀಟ್ ತೆರವಿಗೆ ಸೂಚನೆ ನೀಡಿದೆ.
![ಕೊರೊನಾ ಭೀತಿ: ನೈರುತ್ಯ ರೈಲ್ವೆ ಇಲಾಖೆಯಿಂದ ಹೊಸ ನಿರ್ಧಾರ Corona effect](https://etvbharatimages.akamaized.net/etvbharat/prod-images/768-512-6428698-thumbnail-3x2-hbl.jpg)
ನೈರುತ್ಯ ರೈಲ್ವೆ ಇಲಾಖೆಯಿಂದ ಹೊಸ ನಿರ್ಧಾರ
ರೈಲ್ವೆ ಇಲಾಖೆ ಎಸಿ ಕೋಚ್ನ ವಿಂಡೋ ಕರ್ಟನ್, ಬೆಡ್ ಶೀಟ್ ತೆರವಿಗೆ ಸೂಚನೆ ನೀಡಿದೆ. ಮುಂದಿನ ಆದೇಶದವರೆಗೂ ಈ ಆದೇಶ ಜಾರಿಯಲ್ಲಿರಲಿದೆ. ಎಸಿ ಕೋಚ್ನ ಕನಿಷ್ಠ ತಾಪಮಾನ 24, 25 ಡಿಗ್ರಿಗೆ ಇಳಿಕೆ ಮಾಡಲಾಗಿದೆ.
ಹವಾನಿಯಂತ್ರಿತ ವ್ಯವಸ್ಥೆಯಿಂದ ಕೊರೊನಾ ಹರಡುವ ಭೀತಿ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಆದೇಶವನ್ನು ನೈರುತ್ಯ ರೈಲ್ವೆ ವ್ಯವಸ್ಥಾಪಕ ನಿರ್ದೇಶಕ ಅಜಯಕುಮಾರ್ ಸಿಂಗ್ ಹೊರಡಿಸಿದ್ದಾರೆ.