ಕರ್ನಾಟಕ

karnataka

ETV Bharat / state

ಧಾರವಾಡದಲ್ಲಿ ಕಟ್ಟಡ ಕುಸಿತ ಪ್ರಕರಣ: ಸಾವಿನ ಸಂಖ್ಯೆ 15ಕ್ಕೆ ಏರಿಕೆ - undefined

ನಿರ್ಮಾಣ ಹಂತದ ಕಟ್ಟಡ ಕುಸಿತ ಘಟನೆಯಲ್ಲಿ ಸಾವಿನ ಸಂಖ್ಯೆ 15ಕ್ಕೆ ಏರಿದೆ. ಇನ್ನು ಪ್ರಕರಣ ಸಂಬಂಧ ಕಟ್ಟಡದ ನಾಲ್ವರು ಪಾಲುದಾರರು ಪೊಲೀಸರಿಗೆ ಶರಣಾಗಿದ್ದಾರೆ.

ನಿರ್ಮಾಣ ಹಂತದ ಕಟ್ಟಡ ಕುಸಿತ

By

Published : Mar 22, 2019, 9:52 AM IST

Updated : Mar 22, 2019, 11:33 AM IST

ಧಾರವಾಡ: ಇಲ್ಲಿನ ಕುಮಾರೇಶ್ವರ ನಗರದ ಬಳಿ ನಿರ್ಮಾಣ ಹಂತದ ಕಟ್ಟಡ ಕುಸಿತ ಪ್ರಕರಣದಲ್ಲಿ ಸಾವಿನ ಸಂಖ್ಯೆ 15ಕ್ಕೆ ಏರಿದೆ. ಅವಶೇಷಗಳಡಿ ಸಿಲುಕಿದ್ದ ಮತ್ತೊಂದು ‌ಮೃತದೇಹ ಹೊರಕ್ಕೆ ತೆಗೆಯಲಾಗಿದೆ. ಮೃತ ವ್ಯಕ್ತಿಯನ್ನು ಸುಬ್ಬಪ್ಪ ದಿಂಡಲಕೊಪ್ಪ ಎಂದು ಗುರುತಿಸಲಾಗಿದೆ.

ಸತತ 4 ದಿನಗಳಿಂದ ರಕ್ಷಣಾ ಕಾರ್ಯ ಸಾಗುತ್ತಲೇ ಇದ್ದು, ಅವಶೇಷಗಳಡಿ ಸಿಲುಕಿದ್ದ 60ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಆದರೆ ದುರ್ವಿಧಿಗೆ ಇದೀಗ 15 ಜನ ಬಲಿಯಾಗಿದ್ದಾರೆ.

ನಿರ್ಮಾಣ ಹಂತದ ಕಟ್ಟಡ ಕುಸಿತದಲ್ಲಿ ಮೃತಪಟ್ಟವರ ಹೆಸರುಗಳು :

  1. ಸಲೀಂ ಮಕಾಂದರ್ (35)
  2. ಅಶೀತ್ ಹಿರೇಮಠ (32)
  3. ಮಾಬುಸಾಬ್ ರಾಯಚೂರ (48)
  4. ಮೆಹಬುಸಾಬ್ ದೇಸಾಯಿ (55)
  5. ಮಹೇಶ್ವರಯ್ಯ ಹಿರೇಮಠ (60)
  6. ಅಸ್ಲಂ ಶೇಖ್ (50)
  7. ದಿವ್ಯಾ ಉಣಕಲ್ (8)
  8. ದಾಕ್ಷಾಯಿಣಿ ಮತ್ತೂರ (38)
  9. ಇಸ್ಮಾಯಿಲ್ ಸಾಬ್ ಟೆಕ್ಕೆದ (22)
  10. ಸುಬ್ಬಪ್ಪ ದಿಂಡಲಕೊಪ್ಪ
  11. ಅನೂಪ್ ಕುಡತರಕರ್ (23)

ಉಳಿದರವರ ಹೆಸರುಗಳು ಇನ್ನೂ ಪತ್ತೆಯಾಗಬೇಕಿದೆ.

ಪಾಲುದಾರರ ಶರಣಾಗತಿ:

ಪಾಲುದಾರರ ಶರಣಾಗತಿ

ಬಹು ಮಹಡಿ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡದ 4 ಜನ ಪಾಲುದಾರರು ಉಪನಗರ ಪೊಲೀಸ್ ಠಾಣೆಯಲ್ಲಿ ಮಧ್ಯರಾತ್ರಿ ಶರಣಾಗಿದ್ದಾರೆ. ಮಾಜಿ ಶಾಸಕ ವಿನಯ ಕುಲಕರ್ಣಿ ಮಾವ ಗಂಗಪ್ಪ ಶಿಂತ್ರೆ, ರವಿ ಸಬರದ, ಬಸವರಾಜ ನಿಗದಿ ಹಾಗೂ ರಾಜು ಘಾಟಿನ್ ಪೊಲೀಸರೆದುರು ಶರಣಾದರು.

ಪಾಲುದಾರರ ಶರಣಾಗತಿ
Last Updated : Mar 22, 2019, 11:33 AM IST

For All Latest Updates

TAGGED:

ABOUT THE AUTHOR

...view details