ಕರ್ನಾಟಕ

karnataka

ಹುಬ್ಬಳ್ಳಿ: ಕೆ.ಎಚ್ ಪಾಟೀಲ್ ಪ್ರತಿಮೆ ತೆರವಿಗೆ ಕಾಂಗ್ರೆಸ್​ ನಾಯಕರ ಖಂಡನೆ..

By

Published : Feb 6, 2023, 6:09 PM IST

ಫ್ಲೈಓವರ್ ಕಾಮಗಾರಿ ಹಿನ್ನೆಲೆ ಕೆ.ಎಚ್ ಪಾಟೀಲ್ ಮತ್ತು ಜಗಜ್ಯೋತಿ ಬಸವಣ್ಣ ಪ್ರತಿಮೆ ತೆರವು - ಕಾಂಗ್ರೆಸ್​ ನಾಯಕರಿಂದ ಖಂಡನೆ - ಹೋರಾಟ ಮಾಡುವುದಾಗಿ ಎಚ್ಚರಿಕೆ.

Congress leaders condemn
ಹುಬ್ಬಳ್ಳಿ:ಕೆ.ಎಚ್ ಪಾಟೀಲ್ ಪ್ರತಿಮೆ ತೆರವಿಗೆ ಕಾಂಗ್ರೆಸ್​ ನಾಯಕರ ಖಂಡನೆ

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ‌ ಕಳೆದ ಕೆಲ ದಿನಗಳ ಹಿಂದೆ ದರ್ಗಾ ವಿವಾದ ಸಾಕಷ್ಟು ಸದ್ದು ಮಾಡಿತ್ತು. ರಾತ್ರೋರಾತ್ರಿ ಬೈರಿಕೊಪ್ಪ ಹಜರತ್ ಸೈಯದ್ ದರ್ಗಾ ತೆರವು ಸದನದಲ್ಲೂ ಚರ್ಚೆ ಆಗಿತ್ತು. ಆದರೆ ಇದೀಗ ಹುಬ್ಬಳ್ಳಿಯಲ್ಲಿ ಮತ್ತೆ ಪ್ರತಿಮೆ ತೆರೆವು ಹೋರಾಟದ ಕಿಚ್ಚು ಹಚ್ಚಿದೆ. ಫ್ಲೈಓವರ್ ಕಾಮಗಾರಿ ನೆಪದಲ್ಲಿ ಎರಡು ಪ್ರತಿಮೆ ತೆರವು ಮಾಡಲಾಗಿದ್ದು, ಇದು ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.

ಫ್ಲೈಓವರ್ ಕಾಮಗಾರಿ ಹಿನ್ನೆಲೆಯಲ್ಲಿ ಕಳೆದ ವಾರ ಸಹಕಾರಿ ರಂಗದ ಭೀಷ್ಮ ದಿವಂಗತ ಕೆ.ಎಚ್ ಪಾಟೀಲ್, ಹಾಗೂ ಜಗಜ್ಯೋತಿ ಬಸವಣ್ಣ ಪ್ರತಿಮೆ ತೆರವು ಮಾಡಲಾಗಿದೆ‌. ಇದನ್ನು ಖಂಡಿಸಿ ಹುಬ್ಬಳ್ಳಿ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ ಕಚೇರಿಯಲ್ಲಿ ಸಭೆ ನಡೆಸಿದ ಕಾಂಗ್ರೆಸ್ ನಾಯಕರು ಪಾಲಿಕೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಮೂವತ್ತು ವರ್ಷಗಳ ಹಿಂದೆ ಪಾಲಿಕೆಯಲ್ಲಿ ರೆಸ್ಯುಲೇಶನ್ ಪಾಸ್ ಮಾಡಿ ಕೆ.ಎಚ್ ಪಾಟೀಲ್ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಆದರೆ, ಫ್ಲೈಓವರ್ ಕಾಮಗಾರಿ ಹೆಸರಲ್ಲಿ ಬಸವಣ್ಣ ಹಾಗೂ ಸಹಕಾರಿ ರಂಗದ ಭೀಷ್ಮ‌ ಕೆ.ಎಚ್ ಪಾಟೀಲ್ ರ ಪ್ರತಿಮೆ ತೆರವು ಮಾಡಲಾಗಿದೆ.

ಪಾಲಿಕೆ ಅಧಿಕಾರಿಗಳು ಯಾವುದೇ ನೋಟಿಸ್ ನೀಡದೇ ತೆರವು ಮಾಡಿದ್ದಾರೆ. ಈ ಮೂಲಕ ನಮ್ಮ ನಾಯಕರಿಗೆ ಅಪಮಾನ ಮಾಡಿದ್ದು, ಈ ಕುರಿತು ಎರಡು ದಿನದಲ್ಲಿ ನಮ್ಮನ್ನ ಮೀಟಿಂಗ್​ಗೆ ಕರೆಸಬೇಕು ಎಂದು ಶಾಸಕ ಪ್ರಸಾದ್ ಅಬ್ಬಯ್ಯ ಆಗ್ರಹಿಸಿದರು. ಅಕಸ್ಮಾತ್ ಎರಡು ದಿನದಲ್ಲಿ ನಮಗೆ ಪಾಲಿಕೆ ಉತ್ತರ ಕೊಡದೇ ಹೋದರೆ ನಾವು ಹೋರಾಟ ಮಾಡ್ತೀವಿ ಎಂದು ಪ್ರಸಾದ್ ಅಬ್ಬಯ್ಯ ಪಾಲಿಕೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಇದೇ ವೇಳೆ ಮಾಜಿ ಸಚಿವ ಎ ಎಂ ಹಿಂಡಸಗೇರಿ ಮಾತನಾಡಿ, ಹೇಳದೆ ಕೇಳದೆ ಮೂರ್ತಿಗಳನ್ನ ತೆರವು ಮಾಡುವ ಅವಶ್ಯಕತೆ ಏನಿತ್ತು. ಕೆ ಎಚ್ ಪಾಟೀಲ್ ಪ್ರತಿಷ್ಠಾನವಿದೆ. ಅದಕ್ಕೆ ಒಂದು ನೋಟಿಸ್ ಕೊಟ್ಟಾದರೂ ತೆರವು ಮಾಡಬಹುದಿತ್ತು. ಆದರೆ ಕಳ್ಳರಂತೆ ರಾತ್ರೋರಾತ್ರಿ ಪಾಟೀಲ್ ಮೂರ್ತಿ ತೆರವು ಮಾಡಿ ಅವರಿಗೆ ಅವಮಾನ ಮಾಡಿದ್ದಾರೆ. ಕೂಡಲೇ ಅಧಿಕಾರಿಗಳು ಸಭೆ ಕರೆದು ಮುಂದೆ ಏನು ಮಾಡಬೇಕು ಎಂಬ ಬಗ್ಗೆ ಚರ್ಚೆ ಮಾಡಿ ತೀರ್ಮಾನಕ್ಕೆ ಬರಬೇಕು ಇಲ್ಲವಾದರೆ ಮುಂದಿನ ಹೋರಾಟದ ಬಗ್ಗೆ ರೂಪರೇಷ ಸಿದ್ಧಪಡಿಸಲಾಗುವುದು ಎಂದು ಹೇಳಿದರು.

ರಾತ್ರೋರಾತ್ರಿ ಕಳ್ಳರ ಹಾಗೇ ಮೂರ್ತಿಯನ್ನು ತೆರವು ಮಾಡಿದ್ದು ಖಂಡನೀಯ:ನಂತರ ಮಾಜಿ ಸಂಸದ ಐ.ಜಿ‌.ಸನದಿ ಮಾತನಾಡಿ, ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ ಮಹಾನ್ ವ್ಯಕ್ತಿ ಕೆ.ಹೆಚ್.ಪಾಟೀಲರು, ಅವರ ಅಭಿಮಾನಿಗಳು ಅಭಿಮಾನದಿಂದ ಕಳೆದ 30 ವರ್ಷಗಳ ಹಿಂದೆ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ. ಆದರೆ ಸಮಿತಿಗೆ ಯಾವುದೇ ಒಂದು ಮಾಹಿತಿ ಪತ್ರವನ್ನು ನೀಡದೆಯೇ ರಾತ್ರೋರಾತ್ರಿ ಕಳ್ಳರ ಹಾಗೇ ಮೂರ್ತಿಯನ್ನು ತೆರವು ಮಾಡಿದ್ದು ಖಂಡನೀಯ. ಮುಖಂಡ ಎ.ಎಮ್.ಹಿಂಡಸಗೇರಿ ಅವರ ನೇತೃತ್ವದಲ್ಲಿ ಹೋರಾಟ ಮಾಡಲಾಗುವುದು ಎಂದರು.

ಇದನ್ನೂ ಓದಿ:ಜನಾರ್ದನ ರೆಡ್ಡಿ ಬಿಜೆಪಿಯಲ್ಲಿ ಇಲ್ಲ, ಹೀಗಾಗಿ ಅಧಿಕಾರಕ್ಕೆ ಬರುವುದಿಲ್ಲ: ಎಸ್ ಆರ್ ಹಿರೇಮಠ

ABOUT THE AUTHOR

...view details