ಕರ್ನಾಟಕ

karnataka

ಕಾರು ಅಪಘಾತ ಪ್ರಕರಣ ..‌ ಘಟನೆ ಕುರಿತು ವಿಜಯ್​ ಕುಲಕರ್ಣಿ ಸ್ಪಷ್ಟನೆ ಏನು?

By

Published : Apr 13, 2021, 8:26 AM IST

Updated : Apr 13, 2021, 9:30 AM IST

ರಸ್ತೆ ಪಕ್ಕ ನಿಂತವರ ಮೇಲೆ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಸಹೋದರ ವಿಜಯ್​ ಕುಲಕರ್ಣಿ ಪ್ರಯಾಣಿಸುತ್ತಿದ್ದ ಕಾರು ಹರಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದ ಘಟನೆ ಸೋಮವಾರ ಸಂಭವಿಸಿತ್ತು. ಈ ಸಂಬಂಧ ಅವರು ಸ್ಪಷ್ಟನೆ ನೀಡಿದ್ದಾರೆ. ಬೈಕ್ ಅಡ್ಡ ಬಂದಾಗ, ಅದನ್ನ ತಪ್ಪಿಸಲು ಹೋಗಿ ಅಪಘಾತವಾಗಿದೆ ಎಂದು ಹೇಳಿದ್ದಾರೆ.

Cong leader vijay kulkarni clarification about accident in Dharwad
ಕೈ ಮುಖಂಡ ವಿಜಯ್​ ಕುಲಕರ್ಣಿ

ಧಾರವಾಡ: ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​ ಮುಖಂಡ ವಿಜಯ್​ ಕುಲಕರ್ಣಿ ಪ್ರತಿಕ್ರಿಯಿಸಿದ್ದಾರೆ. ಕಾರನ್ನು‌ ನಾನೇ ಚಲಾಯಿಸುತ್ತಿದ್ದೆ. ಬೈಕ್ ಅಡ್ಡ ಬಂದಾಗ, ಅದನ್ನ ತಪ್ಪಿಸಲು ಹೋಗಿ ಅಪಘಾತವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ವಿಜಯ್​ ಕುಲಕರ್ಣಿ ಸ್ಪಷ್ಟನೆ

ನಗರದಲ್ಲಿ ಸೋಮವಾರ ರಾತ್ರಿ ಸಂಚಾರಿ ಪೊಲೀಸ್ ಠಾಣೆಗೆ ಆಗಮಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಪಘಾತದ ಬಗ್ಗೆ ನಾನೇ ಪೊಲೀಸರಿಗೆ ಮಾಹಿತಿ‌ ನೀಡಿದ್ದೇನೆ. ಆಂಬ್ಯುಲೆನ್ಸ್​ನಲ್ಲಿ ಗಾಯಾಳುಗಳನ್ನ ಆಸ್ಪತ್ರೆಗೆ ಕರೆದೊಯ್ದ ಬಳಿಕ ಅಲ್ಲಿಂದ ತೆರಳಿದ್ದೇನೆ. ಅದು ಯಾವುದೇ‌ ರೀತಿಯ ಡ್ರಂಕ್​ ಆ್ಯಂಡ್​ ಡ್ರೈವ್ ಅಲ್ಲ. ಈ ರೀತಿ ಸುಳ್ಳು ಹಬ್ಬಿಸುವುದು ಸರಿಯಲ್ಲ. ಈಗಾಗಲೇ ನನಗೆ ಟೆಸ್ಟ್​ ಕೂಡಾ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ರಸ್ತೆ ಪಕ್ಕ ನಿಂತವರ ಮೇಲೆ ಹರಿದ ವಿನಯ್ ಕುಲಕರ್ಣಿ ಸಹೋದರ ಪ್ರಯಾಣಿಸುತ್ತಿದ್ದ ಕಾರು: ಇಬ್ಬರ ಸಾವು

ಘಟನೆ ಹಿನ್ನೆಲೆ: ರಸ್ತೆ ಪಕ್ಕ ನಿಂತವರ ಮೇಲೆ ಮಾಜಿ ಸಚಿವ ವಿನಯ್ ಕುಲಕರ್ಣಿ ಸಹೋದರ ವಿಜಯ್​ ಕುಲಕರ್ಣಿ ಪ್ರಯಾಣಿಸುತ್ತಿದ್ದ ಕಾರು ಹರಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದರು. ಘಟನೆಯಲ್ಲಿ ಇತರ ನಾಲ್ವರು ಗಾಯಗೊಂಡಿದ್ದರು. ಬೆಳಗಾವಿ ರಸ್ತೆಯಲ್ಲಿರುವ ಕೆವಿಜಿ ಬ್ಯಾಂಕ್ ಬಳಿ ಘಟನೆ ಸಂಭವಿಸಿತ್ತು. ಈ ವೇಳೆ, ಬೇರೆ ಕಾರಿನಲ್ಲಿ ವಿಜಯ್ ಕುಲಕರ್ಣಿ ಪರಾರಿಯಾಗಿದ್ದಾರೆ ಎನ್ನಲಾಗಿತ್ತು. ರಸ್ತೆ ಪಕ್ಕದಲ್ಲಿ ನಿಂತಿದ್ದ ಐದಾರು ಬೈಕ್​ಗಳಿಗೆ ಕಾರು ಗುದ್ದಿಕೊಂಡು ಬಂದಿದೆ ಎಂದು ಆರೋಪಿಸಲಾಗಿತ್ತು.

Last Updated : Apr 13, 2021, 9:30 AM IST

For All Latest Updates

TAGGED:

ABOUT THE AUTHOR

...view details