ಕರ್ನಾಟಕ

karnataka

ETV Bharat / state

ಡಿಕೆಶಿ ಆಪ್ತ ಛಬ್ಬಿ ವಿರುದ್ಧ ಸಿದ್ದು ಬೆಂಬಲಿಗ ಸಂತೋಷ ಲಾಡ್ ಕೈ ಮೇಲು! - Nagaraja Chhabbi

ಒಂದು ಕಡೆ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಗಾದಿಯ ವಿಚಾರವಾಗಿ ಬಣ ರಾಜಕೀಯ ಜೋರಾಗಿದೆ. ಡಿ.ಕೆ. ಶಿವಕುಮಾರ್​ ಹಾಗೂ ಸಿದ್ದರಾಮಯ್ಯ ಬಣಗಳ ನಡುವಿನ ಮುನಿಸು ಒಂದೊಂದಾಗಿ ಬಹಿರಂಗವಾಗುತ್ತಿವೆ. ಈಗ ಕಲಘಟಗಿಯಲ್ಲಿ ಎರಡು ಬಣಗಳ ಕಿತ್ತಾಟ ಜೋರಾಗಿದೆ.

ಡಿಕೆಶಿ ಆಪ್ತ ನಾಗರಾಜ್ ಛಬ್ಬಿ ವಿರುದ್ಧ ಸಿದ್ದು ಬೆಂಬಲಿಗ  ಸಂತೋಷ ಲಾಡ್ ಕೈ ಮೇಲು!
ಡಿಕೆಶಿ ಆಪ್ತ ನಾಗರಾಜ್ ಛಬ್ಬಿ ವಿರುದ್ಧ ಸಿದ್ದು ಬೆಂಬಲಿಗ ಸಂತೋಷ ಲಾಡ್ ಕೈ ಮೇಲು!

By

Published : Jun 24, 2021, 8:42 PM IST

ಹುಬ್ಬಳ್ಳಿ:ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಆಪ್ತರಾದ ಮಾಜಿ ಸಚಿವ ಸಂತೋಷ ಲಾಡ್ ಮತ್ತು ಡಿಕೆ ಶಿವಕುಮಾರ್​ ಆಪ್ತರಾದ ಮಾಜಿ ಪರಿಷತ್ ಸದಸ್ಯ ನಾಗರಾಜ್ ಛಬ್ಬಿ ನಡುವೆ ಟಿಕೆಟ್​ಗಾಗಿ ಪೈಪೋಟಿ ನಡೆಯುತ್ತಿದೆ.

ಜೂನ್ 12 ರಂದು ಗುರುನಾಥ ದಾನವೇನವರ ಅವರನ್ನ ಕಲಘಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಡಿಕೆಶಿ ನೇಮಕ ಮಾಡಿದ್ದರು. ಡಿಕೆ ಶಿವಕುಮಾರ್​ ಮೂಲಕ ದಾನವೇನವರಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟ ಕಟ್ಟುವಲ್ಲಿ ನಾಗರಾಜ್ ಛಬ್ಬಿ ಯಶಸ್ವಿಯಾಗಿದ್ರು‌. ಸಂತೋಷ ಲಾಡ್ ಬಲಗೈ ಬಂಟ ಮಂಜುನಾಥ ಮುರಳ್ಳಿಯನ್ನ ಅಧ್ಯಕ್ಷ ಸ್ಥಾನದಿಂದ ತೆಗೆಯಲಾಗಿತ್ತು. ಇದರಿಂದ ಸಂತೋಷ ಲಾಡ್​ಗೆ ಭಾರಿ ಮುಖಭಂಗವಾಗಿತ್ತು.

ಡಿಕೆಶಿ ಆಪ್ತ ನಾಗರಾಜ್ ಛಬ್ಬಿ ವಿರುದ್ಧ ಸಿದ್ದು ಬೆಂಬಲಿಗ ಸಂತೋಷ ಲಾಡ್ ಕೈ ಮೇಲು!

ಈಗ ಮತ್ತೆ ಸಂತೋಷ್​ ಲಾಡ್ ಮೇಲುಗೈ ಸಾಧಿಸಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿಯನ್ನು ತಡೆ ಹಿಡಿಸುವಲ್ಲಿ ಸಂತೋಷ ಲಾಡ್​ ಯಶಸ್ವಿಯಾಗಿದ್ದಾರೆ. ಸಂಡೂರಿಗೆ ಸಿದ್ದರಾಮಯ್ಯ ಬಂದು ಹೋಗುತ್ತಿದ್ದಂತೆ ಆದೇಶ ಹೊರಬಿದ್ದಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮೂಲಕ ಅಧ್ಯಕ್ಷರ ನೇಮಕಾತಿಗೆ ತಡೆ‌ ತರಿಸುವಲ್ಲಿ ಯಶಸ್ವಿಯಾಗಿದ್ದು, ಸ್ಥಳಿಯ ಮಟ್ಟದಲ್ಲೂ ಸಿದ್ದರಾಮಯ್ಯ ಬಣ ಮೇಲುಗೈ ಸಾಧಿಸುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಓದಿ:SCO: ಪಾಕ್ ಮೂಲದ ಭಯೋತ್ಪಾದನೆ ಸಂಘಟನೆಗಳ ವಿರುದ್ಧ ಕ್ರಮಕ್ಕೆ ದೋವಲ್ ಆಗ್ರಹ

ABOUT THE AUTHOR

...view details