ಕರ್ನಾಟಕ

karnataka

ETV Bharat / state

ಅಮೃತ ಯೋಜನೆ ಅಡಿ ₹156 ಕೋಟಿ ಅನುದಾನ; ಒಳಚರಂಡಿ, ಮಲಿನ ನೀರು ಸಂಸ್ಕರಣ ಘಟಕಗಳಿಗೆ ಆದ್ಯತೆ - undefined

ಕೇಂದ್ರ ಸರ್ಕಾರದ ನಗರ ಪರಿಚರ್ತನಾ ಪುನರುಜ್ಜೀವನ ಅಭಿಯಾನ ಯೋಜನೆ ಅಡಿ ₹156 ಅನುದಾನ ಬಿಡುಗಡೆ ಮಾಡಲಾಗಿದ್ದು. ಒಳಚರಂಡಿ, ಮಲಿನ ನೀರು ಘಟಕ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಶಾಸಕ ಜಗದೀಶ ಶೆಟ್ಟರ್​ ಹೇಳಿದರು.

ಅಮೃತ ಯೋಜನೆ ಅಡಿ ಸಿದ್ಧಗೊಳ್ಳುತ್ತಿರುವ ಕಾಮಗಾರಿಗಳು

By

Published : Jul 2, 2019, 5:18 AM IST

ಹುಬ್ಬಳ್ಳಿ: ಹು-ಧಾ ಮಹಾನಗರದಲ್ಲಿ ಕೇಂದ್ರ ಸರ್ಕಾರ ಪುರಸ್ಕೃತ ಅಟಲ್ ನಗರ ಪರಿವರ್ತನಾ ಪುನರುಜ್ಜೀವನ್ ಅಭಿಯಾನ(ಅಮೃತ) ಯೋಜನೆಯಡಿಯಲ್ಲಿ ₹156 ಕೋಟಿ ಅನುದಾನ ನೀಡಿದೆ. ಒಳಚರಂಡಿ ಹಾಗೂ ಮಲಿನ ನೀರು ಸಂಸ್ಕರಣಾ ಘಟಕಗಳನ್ನು ನವೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳಲಿವೆ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು.

ಅಮೃತ ಯೋಜನೆ ಅಡಿ ಸಿದ್ಧಗೊಳ್ಳುತ್ತಿರುವ ಕಾಮಗಾರಿಗಳು

ನಗರದ ರೈಲ್ವೆ ಕ್ವಾಟ್ರಸ್ ಮತ್ತು ನವೀನ್ ಪಾರ್ಕ್​ನ ವೆಟ್‌ವೆಲ್ಲ್ (ಮಲಿನ ನೀರಿನ ಸಂಗ್ರಹ ಹಾಗೂ ಮೇಲೆತ್ತುವ ಘಟಕ) ಹಾಗೂ ಉಣಕಲ್‌ನ ಬೈರೀದೇವರಕೊಪ್ಪದ ಮಲಿನದ ನೀರು ಶುದ್ಧೀಕರಣ ಘಟಕಗಳ ಕಾಮಗಾರಿ ಪ್ರಗತಿ ವೀಕ್ಷಿಸಿದರು.

₹156 ಕೋಟಿ ವೆಚ್ಚದಲ್ಲಿ 202 ಕಿ.ಮೀ. ಒಳಚರಂಡಿ ಕೊಳವೆ ಮಾರ್ಗ, 5 ಮಲಿನ ನೀರು ಶುದ್ಧಿಕರಣ ಘಟಕಗಳು ಹಾಗೂ 3 ವೆಟ್‌ವೆಲ್‌ಗಳನ್ನು ಅವಳಿನಗರದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಧಾರವಾಡವಾಡದ ಕೃಷಿ ವಿ.ವಿ.ಯಲ್ಲಿ 10, ಕೆಲಗೇರಿಯಲ್ಲಿ 3, ಹುಬ್ಬಳ್ಳಿಯ ಉಣಕಲ್ ಕೆರೆಯ ಬಳಿ 3, ತೋಳನಕರೆ ಬಳಿ 1 ಹಾಗೂ ರಾಮನಗರದಲ್ಲಿ 0.25 ಎಂ.ಎಲ್.ಡಿ ಸಾಮಾಥ್ಯದ ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳ ಕಾಮಗಾರಿಗಳು ಅರ್ಧಕ್ಕಿಂತ ಹೆಚ್ಚು ಪೂರ್ಣಗೊಂಡಿವೆ.

ಯೋಜನೆಯ ನಿಯಮಾವಳಿಗಳ ಪ್ರಕಾರ ಗುತ್ತಿಗೆದಾರರು 5 ವರ್ಷಗಳ ಕಾಲ ಎಲ್ಲಾ ಘಟಕಗಳ ಮೇಲ್ವಿಚಾರಣೆಯನ್ನು ನೋಡಿಕೊಳ್ಳವರು ಎಂದರು.

For All Latest Updates

TAGGED:

ABOUT THE AUTHOR

...view details