ಕರ್ನಾಟಕ

karnataka

ETV Bharat / state

ಕಬ್ಬಿಣದ ಚಕ್ಕಡಿ ಎಳೆಯೋ ಜಗಜಟ್ಟಿಗಳು: ತೋಳ್ಬಲದಿಂದ ಗಮನ ಸೆಳೆದ ಯುವ ಪಡೆ - ಕಬ್ಬಿಣದ ಚಕ್ಕಡಿ ಓಡಿಸುವ ಸ್ಪರ್ಧೆ

ಒಂದು ಕಡೆಗೆ ಕಬ್ಬಿಣದ ಖಾಲಿ ಚಕ್ಕಡಿ ಎಳೆಯುತ್ತಿರೋ ಯುವಕರು. ಇನ್ನೊಂದು ಕಡೆ ಎಳೆಯೋ ಯುವಕರಿಗೆ ಪ್ರೋತ್ಸಾಹಿಸುವ ಜನ. ಇನ್ನೊಂದು ಕಡೆ ಟೈಮ್ ಸೆಟ್ ಮಾಡಿರುವ ಆಯೋಜಕರು. ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು ಹುಬ್ಬಳ್ಳಿಯಲ್ಲಿ ನಡೆದ ಕಬ್ಬಿಣ ಚಕ್ಕಡಿ ಎಳೆಯೋ ಓಟದ ಸ್ಪರ್ಧೆಯಲ್ಲಿ.

bullock-cart-race-in-hubli
ಕಬ್ಬಿಣ ಚಕ್ಕಡಿ ಎಳೆಯೋ ಜಗಜಟ್ಟಿಗಳು

By

Published : Dec 10, 2022, 12:07 PM IST

ಹುಬ್ಬಳ್ಳಿ:ರಾಜ್ಯದಲ್ಲಿ ಇತ್ತೀಚೆಗೆ ಗ್ರಾಮೀಣ ಕ್ರೀಡೆಗಳು ಮಾಯವಾಗುತ್ತಿವೆ. ಮೊಬೈಲ್ ಬಂದ ಮೇಲೆ ಅಂಗೈನಲ್ಲಿ ಎಲ್ಲ ಸಿಗುವ ತರಹ ಆಗಿದೆ. ಹೀಗಿರುವಾಗ ಚಕ್ಕಡಿ ಸ್ಪರ್ಧೆ, ಕಬಡ್ಡಿ, ಖೋಖೋ, ಭಜನೆ ಪದಗಳಂತಹ ಸ್ಪರ್ಧೆ ಅಲ್ಲೊಂದು ಇಲ್ಲೊಂದು ಕಡೆ ಆಯೋಜನೆ ಮಾಡುವುದನ್ನು ನೋಡಿದ್ದೇವೆ. ಇದೇ ತರಹ ಹುಬ್ಬಳ್ಳಿಯಲ್ಲಿ ಕಬ್ಬಿಣದ ಖಾಲಿ ಚಕ್ಕಡಿ ಓಡಿಸೋ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು.

ಕಬ್ಬಿಣ ಚಕ್ಕಡಿ ಎಳೆದು ತೋಳ್ಬಲ ಪ್ರದರ್ಶಿಸಿ ಗಮನ ಸೆಳೆದ ಯುವ ಪಡೆ

ಗ್ರಾಮೀಣ ಕ್ರೀಡೆ ಮರೆಯಾಗುವ ಸಮಯದಲ್ಲಿ ಹುಬ್ಬಳ್ಳಿಯ ಉಳವೇಶ್ವರ ದೇವಸ್ಥಾನದ ವತಿಯಿಂದ ಖಾಲಿ ಕಬ್ಬಿಣದ ಚಕ್ಕಡಿ ಓಡಿಸುವ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ‌ಒಂದು ನಿಮಿಷದ ಸಮಯದಲ್ಲಿ ಯಾರೂ ದೂರ ಚಕ್ಕಡಿ ಎಳೆಯುತ್ತಾರೋ ಅವರಿಗೆ ಬಹುಮಾನ ಕೊಡಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ನಗದು ಬಹಮಾನವೂ ಇತ್ತು. ಚಕ್ಕಡಿ ಸ್ಪರ್ಧೆಯಲ್ಲಿ ಬೈಲಹೊಂಗಲದಿಂದ ಬಂದ ಯುವಕ ಮೊದಲ ಸ್ಥಾನ ಪಡೆದು 10 ಸಾವಿರ ಬಹುಮಾನ ಗೆದ್ದು ಬೇಷ್ ಎನಿಸಿಕೊಂಡಿದ್ದಾನೆ.

ಇದನ್ನೂ ಓದಿ:ಮಗಳ ಮದ್ವೆ ಹೇಳಿಕೆ ಜೊತೆ ತರಕಾರಿ ಬೀಜದ ಪ್ಯಾಕೆಟ್‌; ಪೋಷಕರಿಂದ ಪರಿಸರ ಜಾಗೃತಿ ಸಂದೇಶ

ABOUT THE AUTHOR

...view details