ಕರ್ನಾಟಕ

karnataka

ETV Bharat / state

ರಕ್ತದ ಅವಶ್ಯಕತೆ ಅರಿತ ಸಂವೃಕ್ಷ ಯುವಕರ ತಂಡ: 80 ಯುನಿಟ್​​​​ ಬ್ಲಡ್​​ ಸಂಗ್ರಹ - hubli blood bank latest news

ರೋಗಿಗಳಿಗೆ ಪ್ರತಿದಿನವೂ ರಕ್ತದ ಅವಶ್ಯಕತೆಯಿತೆ ಇರುವ ಕಾರಣ ರಕ್ತದಾನ ಶಿಬಿರವನ್ನು ಯುವಕರು ಹಮ್ಮಿಕೊಂಡಿದ್ದರು. ತಾಲೂಕು ಪಂಚಾಯತಿ ಸದಸ್ಯರಾದ ಶ್ರೀಮತಿ ಜಗದೀಶ್ ಉಪ್ಪಿನ್ ಅವರ ಬೆಂಬಲದಿಂದ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದರು.

blood-donation-camp
ರಕ್ತದ ಅವಶ್ಯಕತೆಯನ್ನರಿತ ಸಂವೃಕ್ಷ ಯುವಕರ ತಂಡ

By

Published : Apr 28, 2020, 6:59 PM IST

ಹುಬ್ಬಳ್ಳಿ: ಲಾಕ್‌ಡೌನ್​ ಮಾಡಿರುವ ಹಿನ್ನೆಲೆಯಲ್ಲಿ ರಕ್ತದ ಬ್ಯಾಂಕ್​ಗಳಲ್ಲಿ ರಕ್ತದ ಕೊರತೆ ಇರುವುದರಿಂದ ತಾಲೂಕಿನ ಸಂಶಿ ಗ್ರಾಮದ ಜಗದ್ಗುರು ಫಕೀರೇಶ್ವರ ಮಠದಲ್ಲಿ ''ಸಂವೃಕ್ಷ'' ಯುವಕರ ಸಂಘಟನೆಯಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ನಿಯಮಿತ ರೋಗಿಗಳಿಗೆ ಪ್ರತಿದಿನವೂ ರಕ್ತದ ಅವಶ್ಯಕತೆಯಿತೆ ಇರುವ ಕಾರಣ ರಕ್ತದಾನ ಶಿಬಿರವನ್ನು ಯುವಕರು ಹಮ್ಮಿಕೊಂಡಿದ್ದರು. ತಾಲೂಕು ಪಂಚಾಯತಿ ಸದಸ್ಯರಾದ ಶ್ರೀಮತಿ ಜಗದೀಶ್ ಉಪ್ಪಿನ್ ಅವರ ಬೆಂಬಲದಿಂದ ಗ್ರಾಮದಲ್ಲಿ ಯುವಕರ ಹಾಗೂ ವಯಸ್ಕರು ರಕ್ತದಾನ‌ ಮಾಡಿದರು. ಲಾಕ್​ಡೌನ್​ನಿಂದ ರೋಗಿಗಳು ರಕ್ತ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸಂಶಿ ಗ್ರಾಮದ ಯುವಕರು ರಕ್ತದಾನ ಮಾಡುವ ಮೂಲಕ ರೋಗಿಗಳ ಸಮಸ್ಯೆಗೆ ಸ್ಪಂದಿಸಿದ್ದಾರೆ.

ರಕ್ತದ ಅವಶ್ಯಕತೆಯನ್ನರಿತ ಸಂವೃಕ್ಷ ಯುವಕರ ತಂಡ

ಶಿಬಿರದಲ್ಲಿ ಒಟ್ಟು 80 ಯುನಿಟ್ ಬ್ಲಡ್ ಸಂಗ್ರಹಣೆ ಮಾಡಿದ್ದು, ರಾಷ್ಟ್ರೋತ್ಥಾನ ಬ್ಲಡ್ ಬ್ಯಾಂಕ್​ಗೆ ಕಳುಹಿಸಲಾಗುತ್ತದೆ ಎಂದು ಸಂವೃಕ್ಷ ಯುವಕ ಸಂಘಟನೆಯ ಮುಖ್ಯಸ್ಥ ಸುಚಿತ ಅಂಗಡಿ ತಿಳಿಸಿದರು.

ABOUT THE AUTHOR

...view details