ಕರ್ನಾಟಕ

karnataka

ETV Bharat / state

ಹಳ್ಳಿಗಳಿಗೆ ಬೆಣ್ಣೆ ಹಳ್ಳದ ದಿಗ್ಬಂಧನ: ಅಪಾರ ಪ್ರಮಾಣದ ಬೆಳೆ ಹಾನಿ - Crop Damage in Darwad

ಧಾರವಾಡದಲ್ಲಿ ಬಿರುಸಿನ ಮಳೆಯಾಗುತ್ತಿದ್ದು ನವಲಗುಂದ ತಾಲೂಕಿನ ಬೆಣ್ಣೆ ಹಳ್ಳ ಮೈದುಂಬಿ ಹರಿಯುತ್ತಿದೆ. ತಾಲೂಕಿನ ಶಿರಕೋಳ, ಆಯಟ್ಟಿ, ಶಿರೂರ, ಗುಮ್ಮಗೋಳ ಹಾಗೂ ಹಣಸಿ, ಗ್ರಾಮಗಳು ಜಲದಿಗ್ಬಂಧನಕ್ಕೆ ಒಳಗಾಗಿವೆ.

ಹಳ್ಳಿಗಳಿಗೆ ಬೆಣ್ಣೆ ಹಳ್ಳದ ದಿಗ್ಬಂಧನ
ಹಳ್ಳಿಗಳಿಗೆ ಬೆಣ್ಣೆ ಹಳ್ಳದ ದಿಗ್ಬಂಧನ

By

Published : Aug 5, 2020, 7:35 PM IST

ಹುಬ್ಬಳ್ಳಿ: ಮಳೆಯ ಆರ್ಭಟಕ್ಕೆ ಧಾರವಾಡ ಜಿಲ್ಲೆಯಲ್ಲಿ ಅಪಾರ ಹಾನಿ ಸಂಭವಿಸಿದೆ. ಅದರಲ್ಲೂ ನವಲಗುಂದ ತಾಲೂಕಿನ ಬೆಣ್ಣೆ ‌ಹಳ್ಳ ಮೈದುಂಬಿ ಹರಿಯುತ್ತಿದ್ದು, ತಾಲೂಕಿನ ಹಳ್ಳಿ ಜನರಿಗೆ ಅಕ್ಷರಶಃ ದಿಗ್ಬಂಧನ ಹೇರಿದೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ.

ಹಳ್ಳಿಗಳಿಗೆ ಬೆಣ್ಣೆ ಹಳ್ಳದ ದಿಗ್ಬಂಧನ

2007, 2009ರ ಬಳಿಕ ಈಗ ಇನ್ನೊಂದು ಸಲ ಬೆಣ್ಣೆ ಹಳ್ಳಕ್ಕೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದ್ದು, ಗ್ರಾಮೀಣ ಜನರ ನೆಮ್ಮದಿ ಕೆಡಿಸಿದೆ.

ನಗರ, ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳ ಜತೆಗಿನ ಸಂಪರ್ಕ ಕಡಿತಗೊಂಡಿದೆ. ಇದರಿಂದ ಈ ಗ್ರಾಮಗಳು ನಡುಗಡ್ಡೆಯಂತಾಗಿವೆ.

ABOUT THE AUTHOR

...view details