ಕರ್ನಾಟಕ

karnataka

ETV Bharat / state

ಮಹದಾಯಿ ನೋಟಿಫಿಕೇಶನ್​​​ ಸ್ವಾಗತಿಸಿದ ಬಸವರಾಜ ದೇವರು - ಬಸವರಾಜ ದೇವರು ಸ್ವಾಮೀಜಿ

ಮಹದಾಯಿ‌ ಅಧಿಸೂಚನೆ ವಿಚಾರಕ್ಕೆ ಸಂಬಂಧಿಸಿದಂತೆ ತಾಲೂಕಿನ ಮನ್ಸೂರು ರೇವಣಸಿದ್ದೇಶ್ವರ ಮಠದ ಸ್ವಾಮೀಜಿ ಬಸವರಾಜ ದೇವರು ಪ್ರತಿಕ್ರಿಯಿಸಿದ್ದು, ಯೋಜನೆ ಜಾರಿಯಾಗಿದ್ದು ಸಂತೋಷ ತಂದಿದೆ ಎಂದಿದ್ದಾರೆ.

ಬಸವರಾಜ ದೇವರು
Basavaraja Devaru

By

Published : Feb 28, 2020, 9:50 PM IST

ಧಾರವಾಡ:ಮಹದಾಯಿ‌ ಅಧಿಸೂಚನೆ ವಿಚಾರಕ್ಕೆ ಸಂಬಂಧಿಸಿದಂತೆ ತಾಲೂಕಿನ ಮನ್ಸೂರು ರೇವಣಸಿದ್ದೇಶ್ವರ ಮಠದ ಸ್ವಾಮೀಜಿ ಬಸವರಾಜ ದೇವರು ಪ್ರತಿಕ್ರಿಯಿಸಿದ್ಧಾರೆ.

ಮಹದಾಯಿ ನೋಟಿಫಿಕೇಶನ್ ಸ್ವಾಗತಿಸಿದ ಬಸವರಾಜ ದೇವರು

ನಗರದಲ್ಲಿ ಮಾತನಾಡಿದ ಅವರು, ಈ ಒಂದು ಯೋಜನೆಗೆ ಈ ಬಜೆಟ್‌ನಲ್ಲಿ ಬೇಕಾಗುಷ್ಟು ಅನುದಾನ ಮೀಸಲಿಡಬೇಕು. ರಾಜ್ಯ ಬಜೆಟ್‌ನಲ್ಲಿ ಹೆಚ್ಚಿನ ‌ಅನುದಾನ ಕೊಡಬೇಕು. ಇದು ಸರ್ಕಾರದ ಆದ್ಯ ಕರ್ತವ್ಯ ಆಗಬೇಕು. ಗೋವಾ ಸರ್ಕಾರ ಮತ್ತೆ ತಡೆಯಾಜ್ಞೆ ತರಲು ಹೊರಟಿದೆ. ಪ್ರಧಾನಿಯವರೇ ಗೋವಾದವರಿಗೆ ತಿಳಿಹೇಳಬೇಕು ಎಂದು ಆಗ್ರಹಿದರು.

ಈ ಯೋಜನೆಗೆ ಅಡ್ಡಿಯಾಗದಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ನೋಡಿಕೊಳ್ಳಬೇಕು.‌ ಯೋಜನೆ ಜಾರಿಯಾಗಿದ್ದು ಸಂತೋಷ ತಂದಿದೆ. ಹೋರಾಟ ಮಾಡಿದ ಎಲ್ಲರಿಗೂ ಅಭಿನಂದನೆ ಎಂದರು.

ABOUT THE AUTHOR

...view details