ಹುಬ್ಬಳ್ಳಿ:ಎಂಇಎಸ್ವೊಂದು ಕಿಡಿಗೇಡಿಗಳ ಸಂಘಟನೆ, ಅದನ್ನು ನಾವು ಹ್ಯಾಂಡಲ್ ಮಾಡುತ್ತೇವೆ. ಚುನಾವಣೆ ವೇಳೆ ಎಂಇಎಸ್ನವರು ಜನರ ಮನಸ್ಸನ್ನು ಕೆಡಿಸುವ ಗಿಮಿಕ್ ಮಾಡುತ್ತಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಆಸಮಾಧಾನ ವ್ಯಕ್ತಪಡಿಸಿದರು. ಬೆಳಗಾವಿ ಜನರಿಗೆ ಇದೆಲ್ಲ ಗೊತ್ತಿದೆ, ಜನರೇ ಇವರಿಗೆಲ್ಲ ಉತ್ತರ ಕೊಡುತ್ತಾರೆ. ಜನ ತೀರ್ಮಾನ ತೆಗೆದುಕೊಂಡು ಎಂಇಎಸ್ಅನ್ನು ಐದು ವರ್ಷ ಮನೆಗೆ ಕಳಿಸ್ತಾರೆಂದು ಸಿಎಂ ಹೇಳಿದರು.
ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಎಂಇಎಸ್ ಕುರಿತು ಕಪ್ಪುಬಾವುಟ ಪ್ರದರ್ಶನ ಅಲ್ಲ. ಅವರ ಚಟುವಟಿಕೆಗಳೆಲ್ಲ ಕಪ್ಪು ಇರುವಂಥದ್ದು. ಅವರ ಉದ್ದೇಶ ಜನರ ಭಾವನೆಗಳ ವಿರುದ್ಧ ಎನ್ನವಂಥದ್ದು ಬಹಳ ಸ್ಪಷ್ಟವಾಗಿದೆ. ಅವರ ಕೃತ್ಯಗಳೆಲ್ಲವೂ ಕೂಡ ಕಪ್ಪೇ ಇದೆ. ಇದು ಅತ್ಯಂತ ಖಂಡನೀಯ. ಚುನಾವಣೆ ಸಂದರ್ಭದಲ್ಲಿ ಲಾಭಗಳಿಸಲು ಈ ತರ ಮಾಡುತ್ತಿದ್ದಾರೆ. ಆದರೆ ಜನ ಅವರ ಜೊತೆ ಇಲ್ಲ. ಕಳೆದ 25 ವರ್ಷದಿಂದ ಅವರು ಚುನಾವಣಾ ಕಣದಿಂದ ಸೋತಿದ್ದಾರೆ. ಈ ಬಾರಿನೂ ಸೋಲುತ್ತಾರೆ. ಜನರ ಮನಸ್ಸನ್ನು ಕೆಡಿಸುವಂಥ ಗಿಮಿಕ್. ಇದರ ಬಗ್ಗೆ ಬೆಳಗಾವಿ ಜನರಿಗೆಲ್ಲ ತಿಳಿದಿದೆ, ಇದಕ್ಕೆ ಶಾಶ್ವತ ಪರಿಹಾರ ಇಲ್ಲ. ಇದಕ್ಕೆ ಜನ ತೀರ್ಮಾನ ಕೊಟ್ಟಾಗ ತಣ್ಣಗಿರುತ್ತಾರೆ. 5 ವರ್ಷ ಕಳೆದ ನಂತರ ಶುರು ಮಾಡುತ್ತಾರೆ. ಇದು ಕಿಡಿಗೇಡಿಗಳ ಕೆಲಸ. ಎಂಇಎಸ್ ಕಿಡಿಗೇಡಿಗಳ ಸಂಘಟನೆ ಎಂದು ಆರೋಪಿಸಿದರು.
ಇದನ್ನೂ ಓದಿ:ಬಿಜೆಪಿ 1,50,000 ಕೋಟಿ ರೂ. ಲೂಟಿ ಮಾಡಿದೆ: ಭ್ರಷ್ಟಾಚಾರ ಕಾರ್ಡ್ ಬಿಡುಗಡೆ ಮಾಡಿದ ಪವನ್ ಖೇರಾ