ಹುಬ್ಬಳ್ಳಿ : ಜೆಡಿಎಸ್ ಶಾಸಕರು ಹಾಗೂ ಮಾಜಿ ಶಾಸಕರು ಬೇರೆ ಯಾರೇ ಇರಲಿ, ಕೊಲಂಬೋದ ಕ್ಯಾಸಿನೊ ಪ್ರಚಾರಕ್ಕೆ ಯಾರು ಹೋಗಿದ್ದಾರೋ ಅವರಿಗೆ ಮಾತ್ರ ಗೊತ್ತು. ನಾನು ಮಾತ್ರ ಹೋಗಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದರು.
ಶಾಸಕ ಜಮೀರ್ ಅಹ್ಮದ್ ಹೇಳಿಕೆ ವಿಚಾರವಾಗಿ ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೋಗಿದ್ದು ಗೊತ್ತು. ಆದರೆ, ನಾನು ಹೋಗಿರಲಿಲ್ಲ. ಆ ಸಂದರ್ಭದಲ್ಲಿ ನನ್ನ ಚುನಾವಣೆ ಇತ್ತು. ಹೀಗಾಗಿ ನಾನು ಹೋಗಿರಲಿಲ್ಲ. ಆಗ ಮಾಡಿದ ಪ್ರವಾಸದ ವಿಚಾರ ಈಗ ಹೊರಗೆ ಬಂದಿದೆ. ಬಹಳ ಜನರು ಹೋಗಿ ಬಂದಿದ್ದಾರೆ ಎಂದು ಹೊರಟ್ಟಿ, ರಾಜಕೀಯ ನಾಯಕರ ಕೊಲೊಂಬೋ ಪ್ರವಾಸವನ್ನು ಒಪ್ಪಿಕೊಂಡರು.