ಕರ್ನಾಟಕ

karnataka

ETV Bharat / state

'ರಾಮಮೂರ್ತಿ ವಿರುದ್ಧ  ಅಭ್ಯರ್ಥಿ ಹಾಕೋಕಾಗಿಲ್ಲ, ಮೈತ್ರಿ ಬೇರೆ ಕೇಡು ಇವರ ಯೋಗ್ಯತೆಗೆ..' - ಇಂದು ಪ್ರಚಾರಕ್ಕೆ ಕೊನೆಯ ದಿನ

ಇವತ್ತು ಪ್ರಚಾರಕ್ಕೆ ಕೊನೆಯ ದಿನ. ಹದಿನೈದು ಕ್ಷೇತ್ರಗಳಲ್ಲಿ ಬಿಜೆಪಿ ಪರ ಅಲೆ ಇದೆ. ಎಲ್ಲೆಡೆ ಬಿಜೆಪಿಗೆ ಜನ ಬೆಂಬಲ ಇದೆ ಎಂದು ಸಿಎಂ ಬಿಎಸ್​ವೈ ವಿಶ್ವಾಶ ವ್ಯಕ್ತಪಡಿಸಿದ್ದಾರೆ.

B S Yeddyurappa
ಡಿ.9ರ ವರೆಗೆ ಕಾಂಗ್ರೆಸ್ ಜೆಡಿಎಸ್​ನವರು ತೆಪ್ಪಗಿರಲಿ: ಬಿಎಸ್​ವೈ

By

Published : Dec 3, 2019, 12:35 PM IST

ಹುಬ್ಬಳ್ಳಿ: ನಾನು ರಾಜ್ಯದಲ್ಲಿ ಸ್ಥಿರ ಸರ್ಕಾರ ಇರಬೇಕೆಂದು ಎಲ್ಲಾ ಯೋಜನೆಗಳನ್ನೂ ರೂಪಿಸಿದ್ದೇನೆ. ಫೆಬ್ರವರಿಯಲ್ಲಿ ರೈತಪರ ಹೊಸ ಬಜೆಟ್ ಮಂಡಿಸುತ್ತೇನೆ‌ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಡಿ.9ರವರೆಗೆ ಕಾಂಗ್ರೆಸ್-ಜೆಡಿಎಸ್​ನವರು ತೆಪ್ಪಗಿರಲಿ.. ಸಿಎಂ ಬಿಎಸ್​ವೈ

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಇವತ್ತು ಪ್ರಚಾರಕ್ಕೆ ಕೊನೆಯ ದಿನ. ಹದಿನೈದು ಕ್ಷೇತ್ರಗಳಲ್ಲಿ ಬಿಜೆಪಿ ಪರ ಅಲೆ ಇದೆ. ಎಲ್ಲೆಡೆ ಬಿಜೆಪಿಗೆ ಜನಬೆಂಬಲ ಇದೆ. ಕಾಂಗ್ರೆಸ್-ಜೆಡಿಎಸ್​ನವರು ಒಗ್ಗಟ್ಟಾಗಿದ್ದೇವೆ ಎನ್ನುತ್ತಾರೆ. ಆದರೆ, ಯಾವ ಕ್ಷೇತ್ರದಲ್ಲೂ ಆ ವಾತಾವರಣ ಇಲ್ಲ. ಕಾಂಗ್ರೆಸ್​, ಜೆಡಿಎಸ್​ನವರಿಗೆ ರಾಮಮೂರ್ತಿ ವಿರುದ್ಧ ಒಬ್ಬ ಅಭ್ಯರ್ಥಿಯನ್ನೂ ನಿಲ್ಲಿಸಲಾಗಲಿಲ್ಲ. ಈ ಮೂಲಕ ಉಭಯ ಪಕ್ಷದವರು ಸೋಲೊಪ್ಪಿಕೊಂಡಿದ್ದಾರೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಎಂದರು.

ಉಪಚುನಾವಣೆ ನಂತರ ಬಿಎಸ್​ವೈ ರಾಜೀನಾಮೆ ನೀಡುತ್ತಾರೆಂಬ ಎಂದಿರುವ ವಿಪಕ್ಷ ನಾಯಕ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಡಿಸೆಂಬರ್ 9ಕ್ಕೆ ಏನಾಗುತ್ತೆ ಎಂಬುದು ನೀವೇ ನೋಡ್ತೀರಿ.. ಸಿದ್ದರಾಮಯ್ಯನವರು ಅಲ್ಲಿಯವರೆಗೂ ಕಾಯಲಿ. ಅಲ್ಲಿವರೆಗೂ ಕಾಂಗ್ರೆಸ್-ಜೆಡಿಎಸ್​ನವರು ತೆಪ್ಪಗಿರಲಿ ಎಂದರು.

ABOUT THE AUTHOR

...view details