ಕರ್ನಾಟಕ

karnataka

ETV Bharat / state

ಬೇಕಾಬಿಟ್ಟಿ ಓಡಾಟ.. ಹುಬ್ಬಳ್ಳಿಯಲ್ಲಿ ಎಎಸ್​ಐನಿಂದ ಯುವಕನ ಮೇಲೆ ಹಲ್ಲೆ ಆರೋಪ - ASI Beat up youth in hubballi

ಲಾಕ್​ಡೌನ್​ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಹುಬ್ಬಳ್ಳಿಯಲ್ಲಿ ಯವಕನೋರ್ವನಿಗೆ ಎಎಸ್​ಐ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ..

asi-beat-up-youth-for-unfollowing-the-covid-rules-in-hubballi
ಎಎಸ್​ಐನಿಂದ ಯುವಕನ ಮೇಲೆ ಹಲ್ಲೆ ಆರೋಪ

By

Published : May 9, 2021, 10:58 PM IST

ಹುಬ್ಬಳ್ಳಿ :ರಾಜ್ಯಾದ್ಯಂತಕೊರೊನಾ ಹೆಚ್ಚುತ್ತಿರುವ ಹಿನ್ನೆಲೆ ಪೊಲೀಸರು ಕಟ್ಟುನಿಟ್ಟಿನ ಕ್ರಮವನ್ನು ಜರುಗಿಸಿದ್ದಾರೆ. ಆದರೆ, ಹುಬ್ಬಳ್ಳಿ-ಧಾರವಾಡ ಕಮಿಷನರ್ ಅವರು ಸಾರ್ವಜನಿಕರ ಮೇಲೆ ಕೈ ಮಾಡಬಾರದು ಎಂಬ ಆದೇಶ ನೀಡಿದ್ದರೂ ಸಹ ಎಎಸ್​ಐ ಯುವಕನ‌‌‌‌ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಹುಬ್ಬಳ್ಳಿಯಲ್ಲಿ ಎಎಸ್​ಐನಿಂದ ಯುವಕನ ಮೇಲೆ ಹಲ್ಲೆ ಆರೋಪ

ಲಾಕ್​ಡೌನ್​ ಜಾರಿ ಇದ್ದರೂ, ಬೇಕಾಬಿಟ್ಟಿ ಓಡಾಡುತ್ತಿದ್ದಾನೆ ಎಂದು ಆರೋಪಿಸಿರುವ ಪೊಲೀಸರು ಯುವಕನಿಗೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೇ, ಯುವಕನಿಗೆ ಹೊಡೆದ ಪರಿಣಾಮ ಮುಖದ ತೀವ್ರ ಗಾಯಗಳಾಗಿವೆ ಎನ್ನಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಎಎಸ್ಐ ಗೌರಿಮಠ ಅವರು, ಯುವಕನಿಗೆ ನಾನು ಹೊಡೆದಿಲ್ಲವೆಂದು ಹೇಳುತ್ತಿದ್ದಾರೆ. ಆದರೆ, ಅಸಲಿಗೆ ಅಲ್ಲಿ ನಡೆದದ್ದೇನು? ಎಂಬುದನ್ನ ಅಧಿಕಾರಿಗಳು ಪರಿಶೀಲನೆ ನಡೆಸಬೇಕಿದೆ. ಕಸಬಾಪೇಟೆ ಪ್ರದೇಶದಲ್ಲಿ ಬಂದೋಬಸ್ತ್ ನಡೆಸುತ್ತಿದ್ದ ವೇಳೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಓದಿ:ರಾಜ್ಯದಲ್ಲಿಂದು ಕೋವಿಡ್​ಗೆ 490 ಮಂದಿ ಬಲಿ.. 47 ಸಾವಿರಕ್ಕೂ ಅಧಿಕ ಕೇಸ್​ ದಾಖಲು!

ABOUT THE AUTHOR

...view details