ಕರ್ನಾಟಕ

karnataka

ವೇತನ ಹೆಚ್ಚಿಸದಿದ್ದರೆ ಆರೋಗ್ಯ ಸೇವೆ ಸ್ಥಗಿತ: ಆಶಾ ಕಾರ್ಯಕರ್ತೆಯರ ಎಚ್ಚರಿಕೆ!

By

Published : Jul 1, 2020, 4:41 AM IST

ಮಾಸಿಕ 12,000 ರೂ. ವೇತನ ನೀಡುಬೇಕು ಎಂದು ಹಲವು ಬಾರಿ ಮನವಿ ಮಾಡಿದ್ದರೂ ಸರ್ಕಾರ ಸ್ಪಂದಿಸಲಿಲ್ಲ. ಈಗ ಬೇಡಿಕೆ‌ ಈಡೇರಿಸದೆ‌ ಹೋದರೆ ಜುಲೈ 10ರಿಂದ ಆರೋಗ್ಯ ಸೇವೆಯ ಕೆಲಸ ಸ್ಥಗಿತಗೊಳಿಸಿ ಹೋರಾಟ ಮಾಡಲಾಗುವುದು ಎಂದು ಆಶಾ ಕಾರ್ಯಕರ್ತೆಯರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

asha workers
ಆಶಾ ಕಾರ್ಯಕರ್ತೆಯರು

ಕಲಘಟಗಿ: ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಾಲೂಕಿನ ಆಶಾ ಕಾರ್ಯಕರ್ತೆಯರು ತಹಶೀಲ್ದಾರ ಅಶೋಕ ಶಿಗ್ಗಾವಿ ಅವರ‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ಆಶಾ ಕಾರ್ಯಕರ್ತೆಯರು ಸೋಂಕು ನಿಯಂತ್ರಿಸಲು ಶ್ರಮಿಸುತ್ತಿದ್ದಾರೆ. ಮಾಸಿಕ 12,000 ರೂ. ವೇತನ ನೀಡುಬೇಕು ಎಂದು ಹಲವು ಬಾರಿ ಮನವಿ ಮಾಡಿದ್ದರೂ ಸರ್ಕಾರ ಸ್ಪಂದಿಸಲಿಲ್ಲ. ಈಗ ಬೇಡಿಕೆ‌ ಈಡೇರಿಸದೆ‌ ಹೋದರೇ ಜುಲೈ 10ರಿಂದ ಆರೋಗ್ಯ ಸೇವೆಯ ಕೆಲಸ ಸ್ಥಗಿತಗೊಳಿಸಿ ಹೋರಾಟ ಮಾಡುವುದಾಗಿ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಶೋಭಾ ಹಿರೇಮಠ, ಶಾರಧಾ ತಾವರಗೇರಿ, ಸುಶೀಲಾ ಮುಗಳಿ ಸೇರಿದಂತೆ ಇತರರು ಇದ್ದರು.

ABOUT THE AUTHOR

...view details