ಕರ್ನಾಟಕ

karnataka

ಕೊರೊನಾ ನಡುವೆ ಗಣಪನ ಹೊಸ ಅವತಾರ.. ಎಸ್​​ಎಂಎಸ್​​ ಮೂರ್ತಿ ತಯಾರಿಸಿದ ಕಲಾವಿದ!!

By

Published : Jul 21, 2020, 5:51 PM IST

ಕೊರೊನಾ ನಡುವೆ ಗಣೇಶ ಹಬ್ಬ ಮಾಡಬೇಕೋ ಬೇಡವೋ ಎಂಬ ಗೊಂದಲ ಸಹ ಏರ್ಪಟ್ಟಿದೆ. ಈ ನಡುವೆ ಇಲ್ಲಿನ ಕಲಾವಿದರೊಬ್ಬರು ಎಸ್​​ಎಂಎಸ್ ಗಣಪನ ಮೂರ್ತಿ ತಯಾರಿಸಿ ಈ ಮೂಲಕ ಜಾಗೃತಿ ಮೂಡಿಸುವ ವಿಶೇಷ ಪ್ರಯತ್ನಕ್ಕೆ ಮುಂದಾಗಿದ್ದಾರೆ..

Artist who made the SMS Ganapa idol in fear of corona for awareness
ಕೊರೊನಾ ನಡುವೆ ಗಣಪನ ಹೊಸ ಅವತಾರ...ಎಸ್​​ಎಂಎಸ್​​ ಮೂರ್ತಿ ತಯಾರಿಸಿದ ಕಲಾವಿದ

ಧಾರವಾಡ :ಕೊರೊನಾ ವೈರಸ್ ಜಿಲ್ಲೆಯಲ್ಲಿ ದಿನೇದಿನೆ ಹೆಚ್ಚುತ್ತಿದೆ. ಈ ನಡುವೆ ಮುಂದಿನ ತಿಂಗಳು ಗಣೇಶ ಹಬ್ಬ ಆಗಮಿಸುತ್ತಿದೆ. ಈ ಕುರಿತು ಗಣಪತಿ ಮೂರ್ತಿ ತಯಾರಿಸುವ ಕಲಾವಿದರು ಜಾಗೃತಿ ಮೂಡಿಸುತ್ತಿದ್ದಾರೆ.

ಕೊರೊನಾ ನಡುವೆ ಗಣಪನ ಹೊಸ ಅವತಾರ.. ಎಸ್​​ಎಂಎಸ್​​ ಮೂರ್ತಿ ತಯಾರಿಸಿದ ಕಲಾವಿದ

ಧಾರವಾಡದ ಕೆಲಗೇರಿಯ ಗಾಯತ್ರಿಪುರದ ಕಲಾವಿದ ಮಂಜುನಾಥ ಹಿರೇಮಠ ಎಂಬುವರು ಎಸ್‌ಎಂಎಸ್ (ಸ್ಯಾನಿಟೈಸರ್​​, ಮಾಸ್ಕ್​​​, ಸೋಶಿಯಲ್​ ಡಿಸ್ಟೆನ್ಸ್​​) ಗಣಪತಿ ತಯಾರಿಸಿ ಜಾಗೃತಿ ಸಂದೇಶ ಸಾರಲು ಮುಂದಾಗಿದ್ದಾರೆ.

ಕೊರೊನಾ ಜಾಗೃತಿಯ ಮೂರು ಸಂದೇಶದ ಗಣಪತಿ ತಯಾರಿಸಿದ್ದು, ಕೈಯಲ್ಲಿ ಸ್ಯಾನಿಟೈಸರ್, ಮುಖಕ್ಕೆ ಮಾಸ್ಕ್ ಹಾಗೂ 6 ಅಡಿ ಅಂತರದ ಛತ್ರದಡಿ ಗಣೇಶ ಮೂರ್ತಿ ತಯಾರಿಸಿ ಜಾಗೃತಿ ಸಂದೇಶ ಸಾರುತ್ತಿದ್ದಾರೆ.

ಈ ಬಾರಿ ಆಚರಿಸುವ ಗಣೇಶೋತ್ಸವ ಪರಿಸರ ಸ್ನೇಹಿಯಾಗಿ ಹಾಗೂ ಆರೋಗ್ಯ ಸ್ನೇಹಿಯಾಗಿಯೂ ಇರಲಿ ಎಂದು ಮಂಜುನಾಥ ಹಿರೇಮಠ ಅವರು ಈ ವಿಶೇಷ ರೀತಿಯ ಎಸ್ಎಂಎಸ್​ ಗಣೇಶನನ್ನು ತಯಾರಿಸಿದ್ದಾರೆ.

ABOUT THE AUTHOR

...view details