ಧಾರವಾಡ:ಅಂಫಾನ್ ಚಂಡಮಾರುತದ ಪ್ರಭಾವದಿಂದ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಇಂದು ಸಂಜೆ ನಗರದಲ್ಲಿ ಸುರಿದ ಭಾರಿ ಗಾಳಿ ಮಳೆಗೆ ವಿವಿಧೆಡೆ ಮರಗಳು ಧರೆಗುರುಳಿವೆ. ಕೆಲವು ವಾಹನಗಳು ಮರಗಳ ಕೆಳಗೆ ಸಿಲುಕಿ ಜಖಂಗೊಂಡಿವೆ.
ಅಂಫಾನ್ ಚಂಡಮಾರುತದಿಂದ ಹಾನಿಗೊಳಗಾದ ಮನೆ ಸೈದಾಪುರ ಗೌಡರ ಓಣಿಯಲ್ಲಿ ಮನೆಯೊಂದರ ಮೇಲೆ ಮರ ಬಿದ್ದಿದೆ. ನಾಗರಾಜ್ ಸವದತ್ತಿ ಎಂಬುವವರ ಮನೆಗೆ ಇದರಿಂದ ಧಕ್ಕೆ ಸಹ ಆಗಿದೆ. ಇನ್ನು ಮನೆ ಪಕ್ಕ ನಿಲ್ಲಿಸಿದ್ದ ವ್ಯಾನ್ ಮತ್ತು ಬೈಕ್ಗೆ ಹಾನಿ ಉಂಟಾಗಿದೆ.
ಅಂಫಾನ್ ಚಂಡಮಾರುತದಿಂದ ಹಾನಿಗೊಳಗಾದ ಮನೆ ಅಲ್ಲದೆ ಭಾರಿ ಗಾಳಿ ಬೀಸಿದ ಪರಿಣಾಮ ಸಿಬಿಟಿ ಬಳಿಯ ಅಂಜುಮನ್ ಕಾಂಪ್ಲೆಕ್ಸ್ ಎದುರು ರಸ್ತೆಗೆ ಅಡ್ಡಲಾಗಿ ಮರಗಳು ಬಿದ್ದಿವೆ. ಮಳೆಯಿಂದ ಟೋಲ್ ನಾಕಾ ರಸ್ತೆ ಹಳ್ಳದಂತಾಗಿದೆ.
ಅಂಫಾನ್ ಚಂಡಮಾರುತದಿಂದ ಹಾನಿಗೊಳಗಾದ ಮನೆ ತುಂಬಿ ಹರಿಯುತ್ತಿರುವ ರಸ್ತೆಯಲ್ಲಿ ಬೈಕ್ಗಳು ತೇಲಿಕೊಂಡು ಹೋಗುತ್ತಿದ್ದ ದೃಶ್ಯ ಸಹ ಕಂಡು ಬಂತು. ಮಳೆ ಅವಾಂತರದಿಂದ ಧಾರವಾಡ-ಹುಬ್ಬಳ್ಳಿ ಮತ್ತು ಕಲಘಟಗಿ ರಸ್ತೆ ಸಂಚಾರ ಕೆಲ ಹೊತ್ತು ಬಂದ್ ಆಗಿತ್ತು. ಇನ್ನು ಕೆಲಗೇರಿ ಆಂಜನೇಯ ನಗರದಲ್ಲಿ ಸಯ್ಯದ್ ಹೆಬ್ಬಳ್ಳಿ ಎಂಬುವವರ ಮನೆ ಮೇಲೆ ಮರ ಬಿದ್ದು ಹಾನಿ ಉಂಟಾಗಿದೆ.
ಧಾರವಾಡದಲ್ಲಿ ಅವಾಂತರ ಸೃಷ್ಟಿಸಿದ ಅಂಫಾನ್ ಚಂಡಮಾರುತ