ಕರ್ನಾಟಕ

karnataka

By

Published : Aug 17, 2020, 12:28 PM IST

ETV Bharat / state

ನಿರಂತರ ಮಳೆಗೆ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಅಳ್ನಾವರ ಇಂದಿರಮ್ಮನ ಕೆರೆ

ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಹುಲಿಕೆರಿ ಗ್ರಾಮದ ಕೆರೆ ಕಳೆದ ವರ್ಷ ಕೂಡ ಭಾರೀ ಮಳೆಗೆ ತುಂಬಿ ಅನಾಹುತ ಸೃಷ್ಟಿ ಮಾಡಿತ್ತು. ಈ ಬಾರಿಯೂ ಕೆರೆ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಕೋಡಿ ಒಡೆದು ನೀರು ಹರಿಯುವ ಸಾಧ್ಯತೆಯಿದೆ.

Alnavara Indirama Lake flowing beyond the threat due to continuous rainfall
ನಿರಂತರ ಮಳೆಗೆ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಅಳ್ನಾವರ ಇಂದಿರಮ್ಮನ ಕೆರೆ

ಧಾರವಾಡ: ನಿರಂತರ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ಅಳ್ನಾವರ ಇಂದಿರಮ್ಮನ ಕೆರೆ ಕೋಡಿ ತುಂಬಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ನಿರಂತರ ಮಳೆಗೆ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಅಳ್ನಾವರ ಇಂದಿರಮ್ಮನ ಕೆರೆ

ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಹುಲಿಕೆರಿ ಗ್ರಾಮದ ಕೆರೆ ಕಳೆದ ವರ್ಷ ಕೂಡ ಭಾರೀ ಮಳೆಗೆ ತುಂಬಿ ಅನಾಹುತ ಸೃಷ್ಟಿ ಮಾಡಿತ್ತು. ಈ ಬಾರಿಯೂ ಕೆರೆ ಕೋಡಿ ತುಂಬಿದ್ದು, ಕೋಡಿ ಒಡೆದು ನೀರು ಹರಿಯುವ ಸಾಧ್ಯತೆಯಿದೆ.

ಕೆರೆಯ ಕೋಡಿ‌ ನೀರು ಅಳ್ನಾವರ ಪಟ್ಟಣದ ತಗ್ಗು ಪ್ರದೇಶಕ್ಕೆ ನುಗ್ಗುವ ಆತಂಕವಿದೆ. ಈ ಕೆರೆ ಎರಡು ಎಕರೆ ವಿಸ್ತೀರ್ಣ ಹೊಂದಿದೆ. ಮಳೆ ಹೆಚ್ಚಾಗಿ ಕೋಡಿಯಿಂದ ಮತ್ತಷ್ಟು ನೀರು ಹೊರ ಬಂದ್ರೆ ಅಳ್ನಾವರ ಪಟ್ಟಣಕ್ಕೆ ಅಪಾಯ ಎದುರಾಗಲಿದೆ. ಕಳೆದ ವರ್ಷ ಅಳ್ನಾವರ ಪಟ್ಟಣದ ಸಾವಿರಕ್ಕೂ ಅಧಿಕ ಜನರನ್ನು ಧಾರವಾಡದ ಕಾಳಜಿ ಕೇಂದ್ರದಲ್ಲಿ ಇರಿಸಲಾಗಿತ್ತು.

ABOUT THE AUTHOR

...view details