ಕರ್ನಾಟಕ

karnataka

ETV Bharat / state

ಲಂಚ ಪಡೆಯುತ್ತಿದ್ದ ಭೂ ಮಾಪನ ಇಲಾಖೆ ಸರ್ವೇಯರ್​​ ಎಸಿಬಿ ಬಲೆಗೆ - Avvv

9 ಎಕರೆ ಹೊಲವನ್ನು ಅಳತೆ ಮಾಡಿಕೊಡುವುದಕ್ಕೆ  15 ಸಾವಿರ ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಭೂ ಮಾಪನ‌ ಇಲಾಖೆ ಸರ್ವೇಯರ್​ ರೆಡ್​ಹ್ಯಾಂಡ್​ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಭೂ ಮಾಪನ‌ ಇಲಾಖೆ ಸರ್ವೇಯರ್ ರಾಘವೇಂದ್ರ ಎಸ್. ಕುಲಕರ್ಣಿ

By

Published : Jun 4, 2019, 5:14 AM IST

ಹುಬ್ಬಳ್ಳಿ: 9 ಎಕರೆ ಹೊಲವನ್ನು ಅಳತೆ ಮಾಡಿಕೊಡುವುದಕ್ಕೆ 15 ಸಾವಿರ ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಭೂ ಮಾಪನ‌ ಇಲಾಖೆ ಸರ್ವೇಯರ್ ರಾಘವೇಂದ್ರ ಎಸ್. ಕುಲಕರ್ಣಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಕುಂದಗೋಳ ತಾಲೂಕು ಶಿರೂರ ಗ್ರಾಮದ ಮಲ್ಲಿಕಾರ್ಜುನಗೌಡ ಭರಮಗೌಡ ಪಾಟೀಲ್​ ಎಂಬುವರ ಅವರ 9 ಎಕರೆ ಜಮೀನನ್ನು ಅಳತೆ ಮಾಡಿಕೊಡುವುದಕ್ಕೆ ಸರ್ವೇಯರ್​ 15 ಸಾವಿರ ಬೇಡಿಕೆ ಇಟ್ಟಿದ್ದರಂತೆ. ಈ ಲಂಚದ ಹಣವನ್ನು ಪಡೆಯುತ್ತಿರುವಾಗ ಎಸಿಬಿ ಅಧಿಕಾರಿಗಳು ಸರ್ವೇಯರ್​ನನ್ನು ರೆಡ್​​ ಹ್ಯಾಡಾಗಿ ಹಿಡಿದಿದ್ದಾರೆ.

ಎಸಿಬಿ ಡಿವೈಎಸ್ಪಿ ವಿಜಯಕುಮಾರ್ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದ್ದು, ಲಂಚ ಪಡೆಯುತ್ತಿದ್ದ ಭೂ ಮಾಪನ‌ ಇಲಾಖೆ ಸರ್ವೇಯರ್ ರಾಘವೇಂದ್ರ ಎಸ್. ಕುಲಕರ್ಣಿಯನ್ನ ವಶಕ್ಕೆ ಪಡೆಯಲಾಗಿದೆ.

For All Latest Updates

TAGGED:

Avvv

ABOUT THE AUTHOR

...view details