ಕರ್ನಾಟಕ

karnataka

ETV Bharat / state

ಉತ್ತರ ಕರ್ನಾಟಕ ಜನ ಕಲಾವಿದರಿಗೆ ಬಹಳ ಗೌರವ ಕೊಡ್ತಾರೆ : ಅಭಿಷೇಕ್ ಅಂಬರೀಶ್ - ಈಟಿವಿ ಭಾರತ್ ಕನ್ನಡ ಸುದ್ದಿ

ಉತ್ತರ ಕರ್ನಾಟಕ ಜನ ಕಲಾವಿದರಿಗೆ ಬಹಳ ಗೌರವ ಕೊಡ್ತಾರೆ. ಈ ಭಾಗದ ಜನರ ಆಶೀರ್ವಾದ ತೆಗೆದುಕೊಳ್ಳಲು ನಾನು ಇಲ್ಲಿಗೆ ಬಂದಿದ್ದೇನೆ ಎಂದು ನಟ ಅಭಿಷೇಕ್ ಅಂಬರೀಶ್​ ಹೇಳಿದ್ದಾರೆ.

ನಟ ಅಭಿಷೇಕ್ ಅಂಬರೀಶ್
ನಟ ಅಭಿಷೇಕ್ ಅಂಬರೀಶ್

By ETV Bharat Karnataka Team

Published : Nov 21, 2023, 5:03 PM IST

ನಟ ಅಭಿಷೇಕ್ ಅಂಬರೀಶ್

ಹುಬ್ಬಳ್ಳಿ : ಇದೇ ಶುಕ್ರವಾರ ನವೆಂಬರ್​ 24 ರಂದು ಬ್ಯಾಡ್ ಮ್ಯಾನರ್ಸ್ ಚಿತ್ರ ಸುಮಾರು 300 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಾಯಕ ನಟ ಅಭಿಷೇಕ್​ ಅಂಬರೀಶ್‌ ಹೇಳಿದ್ದಾರೆ. ನಗರದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಜನ ಕಲಾವಿದರಿಗೆ ಬಹಳ ಗೌರವ ಕೊಡ್ತಾರೆ. ಈ ಭಾಗದ ಜನರ ಆಶೀರ್ವಾದ ತೆಗೆದುಕೊಳ್ಳಲು ನಾನು ಇಲ್ಲಿಗೆ ಬಂದಿದ್ದೇನೆ. ಇಡೀ ಸಿನಿಮಾ ಕರ್ನಾಟಕದಲ್ಲಿ ಶೂಟಿಂಗ್ ಆಗಿದೆ. ಸಿನಿಮಾದಲ್ಲಿ ಉತ್ತರ ಕರ್ನಾಟಕದ ಕಲಾವಿದರು ಇದ್ದಾರೆ ಎಂದು ಹೇಳಿದರು.

ಸಿನಿಮಾ ಪ್ಯಾನ್ ಇಂಡಿಯಾ ಮಾಡ್ತೀವಿ ಅಂದ್ರೆ ಕಷ್ಟ. ಪ್ಯಾನ್ ಇಂಡಿಯಾಗಿಂತ ಒಳ್ಳೆ ಸಿನಿಮಾ ಮಾಡಬೇಕು. ಸಿನಿಮಾ ನೋಡಿದ ಮೇಲೆ ಪ್ಯಾನ್ ಇಂಡಿಯಾ ಸಿನಿಮಾನಾ ಇದು ಎಂದು ಜನ ಡಿಸೈಡ್ ಮಾಡ್ತಾರೆ. ಸೂರಿ ಅವರಿಗೆ ಅವರದ್ದೇ ಅಂತ ಪ್ರೇಕ್ಷಕ ವರ್ಗವಿದೆ. ಹೀಗಾಗಿ ಅವರ ಜೊತೆ ಸಿನಿಮಾ ಮಾಡಿರೋದು ಬಹಳ ಖುಷಿ ಇದೆ. ಸಿನಿಮಾ ಟ್ರೇಲರ್ ನೋಡಿದ ಮೇಲೆ ಕೆಲವರು ಅಭಿಯಲ್ಲಿ ಅಂಬರೀಶ್​ ಅವರನ್ನ ಕಾಣ್ತೀದಿವಿ ಅಂತೀದಾರೆ ಎಂದರು.

ನಾನು ಯಾವುದೇ ಕಾರಣಕ್ಕೂ ರಾಜಕಾರಣಕ್ಕೆ ಬರಲ್ಲ. ಸಿನಿಮಾ ರಂಗ ಬೇರೆ, ರಾಜಕಾರಣ ಬೇರೆ. ಸಿನಿಮಾ ಅಂದ್ರೆ ದುಡ್ಡು ಕೊಟ್ಟು ಬರ್ತಾರೆ, ರಾಜಕಾರಣಕ್ಕೆ ನಾವೇ ದುಡ್ಡು ಕೊಟ್ಟು ಜನರನ್ನು ಕರಿಬೇಕು. ನಮ್ಮ ತಾಯಿ ರಾಜಕೀಯದಲ್ಲಿ ಇರುವವರೆಗೂ ನಾನು ರಾಜಕೀಯಕ್ಕೆ ಬರೋಲ್ಲ. ನಮ್ಮ‌ ತಂದೆಯವರು 30 ವರ್ಷಕ್ಕೂ ‌ಹೆಚ್ಚು ವರ್ಷ ಸಿನಿಮಾ ರಂಗದಲ್ಲಿ ‌ಕೆಲಸ ಮಾಡಿದ ಮೇಲೆ ರಾಜಕೀಯ ರಂಗಕ್ಕೆ ಬಂದ್ರು. ನಾನು ಕೂಡ ಎರಡು ದೋಣಿ ಮೇಲೆ ಕಾಲು ಇಡಲು‌ ಇಷ್ಟಪಡುವುದಿಲ್ಲ ಎಂದು ಹೇಳಿದರು.

ಬ್ಯಾಡ್ ಮ್ಯಾನರ್ಸ್​ ಚಿತ್ರ ನೋಡಿದ ನಟ ದರ್ಶನ್: ದರ್ಶನ್ ಅವರು ಸುಮಲತಾ ಅಂಬರೀಶ್​ ಜೊತೆಗೆ ಬ್ಯಾಡ್ ಮ್ಯಾನರ್ಸ್ ಚಿತ್ರ ನೋಡಿ ಅಭಿಷೇಕ್​ನಲ್ಲಿ ರಿಯಲ್ ಅಂಬರೀಶ್​ ಶೇಡ್​ಗಳನ್ನ ನೋಡಬಹುದು ಅಂತಾ ಬೆನ್ನು (20-11-2023) ತಟ್ಟಿದ್ದರು. ಅಷ್ಟೇ ಅಲ್ಲ, ಅಭಿ ಬೆನ್ನಿಗೆ ನಿಮ್ಮ ಪ್ರೀತಿಯ ದಾಸ ಎಂದು ಬರೆದು 5ಕ್ಕೆ 5 ಸ್ಟಾರ್​ಗಳನ್ನ ಬರೆದಿದ್ದರು. ಈ ಸಿನಿಮಾದಲ್ಲಿ ನೀವು ರಿಯಲ್ ರೆಬೆಲ್ ಸ್ಟಾರ್​ ಅನ್ನು ನೋಡ್ತೀರಿ. ಮೊದಲನೇ ಸಿನಿಮಾಕ್ಕಿಂತ ಎರಡನೇ ಸಿನಿಮಾದಲ್ಲಿ ಅಭಿ ಅವರದ್ದು ತುಂಬಾ ಇಂಪ್ರ್ಯೂ​ಮೆಂಟ್​ ಇದೆ. ಸಿನಿಮಾ ಬೇರೆ ಲೆವೆಲ್​ ಇದೆ. ದೊಡ್ಡ ಯಶಸ್ಸು ಇದಕ್ಕೆ ಖಂಡಿತ ಸಿಗಲಿದೆ ಎಂದು ದರ್ಶನ್ ಭವಿಷ್ಯ ನುಡಿದಿದ್ದರು.

ನಿರ್ದೇಶಕ ದುನಿಯಾ ಸೂರಿ ಹಾಗೂ ಅಭಿಷೇಕ್ ಅಂಬರೀಶ್ ಕಾಂಬಿನೇಷನ್‌ನಲ್ಲಿ ಬರ್ತಿರೋ ಬ್ಯಾಡ್ ಮ್ಯಾನರ್ಸ್‌ ಸಿನಿಮಾ ಬಹಳ ನಿರೀಕ್ಷೆ ಹುಟ್ಟು ಹಾಕಿದ್ದು, ಸುಕ್ಕಾ ಸೂರಿ ರಾ ಆ್ಯಕ್ಷನ್ ಥ್ರಿಲ್ಲರ್ ನೋಡೋಕೆ ಒಂದು ವರ್ಗದ ಪ್ರೇಕ್ಷಕರಂತೂ ತುದಿಗಾಲಲ್ಲಿ ನಿಂತಿದ್ದಾರೆ. 3 ವರ್ಷಗಳ ಬಳಿಕ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದಲ್ಲಿ ಅಭಿ ಖಡಕ್ ಪೊಲೀಸ್ ಆಫೀಸರ್ ಆಗಿ ಮಿಂಚುತ್ತಿದ್ದು, ರಚಿತಾ ರಾಮ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:ಬ್ಯಾಡ್ ಮ್ಯಾನರ್ಸ್ ಚಿತ್ರ ನೋಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಭಿಷೇಕ್ ಬಗ್ಗೆ ಹೇಳಿದ್ದೇನು ?

ABOUT THE AUTHOR

...view details