ಧಾರವಾಡ:ಜಿಲ್ಲೆಯ ಜನ ಶೂಟೌಟ್ ಪ್ರಕರಣ ಮರೆಯುವ ಮುನ್ನವೇ ನಗರದಲ್ಲಿ ಮತ್ತೊಂದು ಅಪರಾಧ ಪ್ರಕರಣ ಸದ್ದು ಮಾಡಿದೆ. ಚಾಕು ಇರಿತಕ್ಕೆ ಯುವಕನೋರ್ವ ಬಲಿಯಾಗಿದ್ದಾನೆ.
ಧಾರವಾಡದಲ್ಲಿ ಮತ್ತೊಂದು ಅಪರಾಧ ಪ್ರಕರಣ: ಚಾಕು ಇರಿತಕ್ಕೆ ಯುವಕ ಬಲಿ - ನಿಜಾಮೋದ್ದೀನ್ ಕಾಲೋನಿ
ಧಾರವಾಡ ಜಿಲ್ಲೆಯ ಜನತೆ ಶೂಟೌಟ್ ಪ್ರಕರಣ ಮರೆಯುವ ಮುನ್ನವೇ ಧಾರವಾಡದಲ್ಲಿ ಮತ್ತೊಂದು ಅಪರಾಧ ಪ್ರಕರಣ ಜನರ ನಿದ್ದೆಗೆಡಿಸಿದೆ. ಚಾಕು ಇರಿತದಿಂದ ಯುವಕನೋರ್ವ ಸಾವನ್ನಪ್ಪಿದ್ದಾನೆ.
![ಧಾರವಾಡದಲ್ಲಿ ಮತ್ತೊಂದು ಅಪರಾಧ ಪ್ರಕರಣ: ಚಾಕು ಇರಿತಕ್ಕೆ ಯುವಕ ಬಲಿ](https://etvbharatimages.akamaized.net/etvbharat/prod-images/768-512-4596594-thumbnail-3x2-vid.jpg)
ಚಾಕು ಇರಿತಕ್ಕೆ ಬಲಿಯಾದ ಯುವಕ
ಜಿಲ್ಲೆಯ ನಿಜಾಮೊದ್ದೀನ್ ಕಾಲೋನಿ ನಿವಾಸಿ ಜಾಫರ್ ಮಕಾನದಾರ್ (18) ಚಾಕು ಇರಿತಕ್ಕೊಳಗಾದ ಯುವಕನಾಗಿದ್ದಾನೆ. ಮಣಕಿಲ್ಲಾ ನಿವಾಸಿಯಾಗಿರುವ ಮಹ್ಮದ್ ಜುಬೇರನಿಗೆ ತಡರಾತ್ರಿ ನಿಜಾಮೊದ್ದೀನ್ ಕಾಲನಿ ಬಳಿ ಮಾರಣಾಂತಿಕ ಹಲ್ಲೆ ನಡೆದಿದ್ದು, ಸ್ಥಳದಲ್ಲಿಯೇ ಅಸ್ವಸ್ಥಗೊಂಡು ಕುಸಿದುಬಿದ್ದಿದ್ದ ಜುಬೇರನನ್ನು ತಕ್ಷಣವೇ ಸಮೀಪದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಷ್ಟರಲ್ಲೇ ಆತ ಮೃತಪಟ್ಟಿದ್ದಾನೆ ಎಂಬುದನ್ನು ವೈದ್ಯರು ದೃಢಪಡಿಸಿದ್ದಾರೆ.
ಈ ಘಟನೆ ಶಹರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.