ಹುಬ್ಬಳ್ಳಿ:ಎಮ್ಮೆ ತೊಳೆಯಲು ಹೋಗಿದ್ದ ವ್ಯಕ್ತಿಯೊರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲೂಕಿನ ಕುರಡಿಕೇರಿ ಗ್ರಾಮದ ಕೆಂಪಗೇರಿ ಕೆರೆಯಲ್ಲಿ ನಡೆದಿದೆ.
ಎಮ್ಮೆ ತೊಳೆಯಲು ಹೋಗಿದ್ದ ವ್ಯಕ್ತಿ ಕೆರೆಯಲ್ಲಿ ಮುಳುಗಿ ಸಾವು - ಎಮ್ಮೆ ತೊಳೆಯಲು ಹೋಗಿದ್ದ ವ್ಯಕ್ತಿ ಕೆರೆಯಲ್ಲಿ ಮುಳುಗಿ ಸಾವು
ಕುಂದಗೋಳ ತಾಲೂಕಿನ ಕೋಳಿವಾಡ ಗ್ರಾಮದ ಯಲ್ಲಪ್ಪ ಫಕ್ಕಿರಪ್ಪ ಶಿರಗುಪ್ಪಿ ಎಂಬಾತ ಕೆರೆಯಲ್ಲಿ ಎಮ್ಮೆ ತೊಳೆಯಲು ಹೋಗಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
![ಎಮ್ಮೆ ತೊಳೆಯಲು ಹೋಗಿದ್ದ ವ್ಯಕ್ತಿ ಕೆರೆಯಲ್ಲಿ ಮುಳುಗಿ ಸಾವು Hubli](https://etvbharatimages.akamaized.net/etvbharat/prod-images/768-512-6010712-thumbnail-3x2-mng.jpg)
ಹುಬ್ಬಳ್ಳಿ
ಕುಂದಗೋಳ ತಾಲೂಕಿನ ಕೋಳಿವಾಡ ಗ್ರಾಮದ ಯಲ್ಲಪ್ಪ ಫಕ್ಕಿರಪ್ಪ ಶಿರಗುಪ್ಪಿ (45) ಮೃತ ವ್ಯಕ್ತಿ. ಈತ ತನ್ನ ಅಕ್ಕನ ಮನೆಗೆ ಬಂದಿದ್ದ ವೇಳೆಯಲ್ಲಿ ಎಮ್ಮೆ ತೊಳೆಯಲು ಕೆರೆಗೆ ತೆರಳಿದ್ದ. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.