ಕರ್ನಾಟಕ

karnataka

ಮುಂಬೈ ಡಿಸಿಪಿ ಹೆಸರಿನಲ್ಲಿ ಹುಬ್ಬಳ್ಳಿ ವೈದ್ಯನಿಗೆ ₹ 30 ಲಕ್ಷ ವಂಚನೆ

ಮುಂಬೈ ಡಿಸಿಪಿ ಹೆಸರಿನಲ್ಲಿ ವೈದ್ಯರೊಬ್ಬರಿಗೆ 30 ಲಕ್ಷ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಹುಬ್ಬಳ್ಳಿ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By ETV Bharat Karnataka Team

Published : Jan 8, 2024, 4:36 PM IST

Published : Jan 8, 2024, 4:36 PM IST

30 lakh rupees fraud  ಡಿಸಿಪಿ ಹೆಸರಿನಲ್ಲಿ ವಂಚನೆ  ಸಿಇಎನ್ ಕ್ರೈಂ ಪೊಲೀಸ್  Hubli CEN Crime Police
ಮುಂಬೈ ಡಿಸಿಪಿ ಹೆಸರಿನಲ್ಲಿ ವೈದ್ಯರೊಬ್ಬರಿಗೆ 30 ಲಕ್ಷ ವಂಚನೆ

ಹುಬ್ಬಳ್ಳಿ:ಮುಂಬೈ ಡಿಸಿಪಿ ಹೆಸರಿನಲ್ಲಿ ನಗರದ ವೈದ್ಯರೊಬ್ಬರಿಗೆ ವಿಡಿಯೋ ಕಾಲ್ ಮೂಲಕ ಭಯ ಹುಟ್ಟಿಸಿ ವಿವಿಧ ಲಿಂಕ್ ಮೂಲಕ 30.16 ಲಕ್ಷ ರೂಪಾಯಿ ವರ್ಗಾಯಿಸಿಕೊಂಡು ವಂಚಿಸಲಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಡಾ.ರಾಜೀವ್ ಮೊಸಕ್ಕೊಳಗಾದವರು. ಖಾಸಗಿ ಕಂಪನಿ ಹೆಸರಿನಲ್ಲಿ ಅಪರಿಚಿತ ವ್ಯಕ್ತಿಯು ಕೆಲ ವಸ್ತುಗಳನ್ನು ಬುಕ್ ಮಾಡಿದ್ದಾರೆ. ಅದಕ್ಕೆ ನಿಮ್ಮ ಆಧಾರ್ ಕಾರ್ಡ್ ನಂಬ‌ರ್ ಲಿಂಕ್ ಇದೆ ಎಂದು ಮಾತನಾಡಿದ್ದಾರೆ. ಇದಕ್ಕೆ ರಾಜೀವ್ ಅವರು ತಾನು ಯಾವುದೇ ಕೋರಿಯರ್ ಮಾಡಿಲ್ಲ ಎಂದು ಹೇಳಿದಾಗ ನಿಮ್ಮ ಆಧಾ‌ರ್ ಕಾರ್ಡ್ ಮಾಹಿತಿ ಸೋರಿಕೆಯಾಗಿದೆ. ಇದಕ್ಕೆ ನೀವು ಮುಂಬೈ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ನೀಡಬೇಕು ಎಂದಿದ್ದಾರೆ. ನಂತರ ಆ್ಯಪ್​ವೊಂದರ ಮೂಲಕ ವಿಡಿಯೋ ಕರೆ ಮಾಡಿದ ಅಪರಿಚಿತನು ತಾನು ಮುಂಬೈ ಡಿಸಿಪಿ ಎಂದು ಹೇಳಿ ಭಯ ಹುಟ್ಟಿಸಿದ್ದಾನೆ. ನಂತರ ವಿವಿಧ ಖಾತೆಗಳ ಮಾಹಿತಿ ಪಡೆದು 30,16,742 ವರ್ಗಾಯಿಸಿಕೊಂಡು ವಂಚಿಸಿರುವುದಾಗಿ ಡಾ. ರಾಜೀವ್ ತಿಳಿಸಿದ್ದಾರೆ. ಈ ಕುರಿತು ಹುಬ್ಬಳ್ಳಿ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಪ್ರಕರಣ, ಕೆವೈಸಿ ಲಿಂಕ್ ಕಳಿಸಿ ವೈದ್ಯರಿಗೆ ವಂಚನೆ:ಹುಬ್ಬಳ್ಳಿ ನಗರದ ವೈದ್ಯರೊಬ್ಬರಿಗೆ ಅಪರಿಚಿತ ವ್ಯಕ್ತಿಯೋರ್ವ ಬ್ಯಾಂಕ್‌ನ ಕೆವೈಸಿ ಪ್ರತಿನಿಧಿ ಎಂದು ನಂಬಿಸಿ ಅವರ ಖಾತೆಯಿಂದ ಎಟಿಎಂ ಹಾಗೂ ಆನ್‌ಲೈನ್ ಮೂಲಕ 65 ಸಾವಿರ ರೂಪಾಯಿ ವರ್ಗಾಯಿಸಿಕೊಂಡು ವಂಚಿಸಿರುವ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಇಲ್ಲಿನ ಗೋಕುಲ ರಸ್ತೆ ಮುರಾರ್ಜಿ ನಗರದ ವೈದ್ಯರು ಆಸ್ಪತ್ರೆಯಲ್ಲಿದ್ದಾಗ ನಿಮ್ಮ ಎಸ್‌ಬಿಐ ಖಾತೆ ಬ್ಲಾಕ್ ಆಗಿದೆ. ಕೆವೈಸಿ ಅಪ್‌ಡೇಟ್ ಮಾಡಿಕೊಳ್ಳಿ ಎಂದು ಮೊಬೈಲ್​ಗೆ ಸಂದೇಶ ಕಳುಹಿಸಿದ್ದನು. ಅವರು ತಮಗೆ ಬಂದ ಒಟಿಪಿ ಸಂಖ್ಯೆ ಹಾಕಿ ಸಬ್ಮಿಟ್ ಮಾಡಿದಾಗ ಹಂತ ಹಂತವಾಗಿ ಹಣವನ್ನು ವರ್ಗಾಯಿಸಿಕೊಂಡು ವಂಚನೆ ಮಾಡಿದ್ದನು. ಈ ಕುರಿತು ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ:ಹೈದರಾಬಾದ್​ನಲ್ಲಿ ಯುವತಿ ಮೇಲೆ ಅತ್ಯಾಚಾರ: ಇಬ್ಬರು ಆರೋಪಿಗಳ ಬಂಧನ

ABOUT THE AUTHOR

...view details