ದಾವಣಗೆರೆ: ವಿಷಕಾರಿ ಜೇನು ಜಾತಿಯ ಹುಳು ಕಡಿದು ವಿಂಡ್ ಪ್ಯಾನ್ ಕಂಪನಿಯ ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಯಲೋದಹಳ್ಳಿ ಗ್ರಾಮದಲ್ಲಿ ನಡೆದಿದೆ. ಜಿ.ಪಿ.ಶಿವಕುಮಾರ್ ಅಲಿಯಾಸ್ ಬಾಬಣ್ಣ (49) ಮೃತ ದುರ್ದೈವಿ. ಶಿವಕುಮಾರ್ ಅವರು ವೆಸ್ಟಾಸ್ ಆರ್ಆರ್ಬಿ ವಿಂಡ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಎಂದಿನಂತೆ ವಿಂಡ್ ಫ್ಯಾನ್ ಪ್ಲಾಂಟ್ ಬಳಿ ಕಾರ್ಯನಿರ್ವಹಿಸುವಾಗ ಘಟನೆ ನಡೆದಿದೆ.
ದಾವಣಗೆರೆ: ವಿಷಕಾರಿ ಹುಳು ಕಡಿದು ವಿಂಡ್ ಪ್ಯಾನ್ ಕಂಪನಿ ಸಿಬ್ಬಂದಿ ಸಾವು - ವೆಸ್ಟಾಸ್ ಆರ್ಆರ್ಬಿ ವಿಂಡ್ ಕಂಪನಿ
ಈ ಪ್ರದೇಶದಲ್ಲಿ ವಿಷಕಾರಿ ಜೇನು ಹುಳುವಿನಿಂದ ಸಾವನ್ನಪ್ಪಿರುವ ಘಟನೆ ಇದು ಎರಡನೇಯದು. ಅರಣ್ಯ ಇಲಾಖೆಯ ಮೇಲೆ ಆಕ್ರೋಶಗೊಂಡಿರುವ ಸ್ಥಳೀಯರು ಹುಳುಗಳನ್ನು ಓಡಿಸಿ ಗೂಡು ನಾಶ ಮಾಡುವಂತೆ ಆಗ್ರಹಿಸಿದ್ದಾರೆ.
![ದಾವಣಗೆರೆ: ವಿಷಕಾರಿ ಹುಳು ಕಡಿದು ವಿಂಡ್ ಪ್ಯಾನ್ ಕಂಪನಿ ಸಿಬ್ಬಂದಿ ಸಾವು Poisonous bee species worm nest](https://etvbharatimages.akamaized.net/etvbharat/prod-images/768-512-16885355-thumbnail-3x2-dgg.jpg)
ವಿಷಕಾರಿ ಜೇನು ಜಾತಿಯ ರಾಮ ಹುಳು ಗೂಡು
ಇದು ವಿಚಿತ್ರವಾಗಿ ಗೂಡು ಕಟ್ಟುವ ಹುಳು. ಈ ರೀತಿಯ ಸಾವು ಇದು ಎರಡನೇಯ ಬಾರಿಗೆ ನಡೆದಿದ್ದು ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುಳುಗಳನ್ನು ಓಡಿಸಿ ಗೂಡುಗಳನ್ನು ನಾಶ ಮಾಡುವಂತೆ ಆಗ್ರಹಿಸಿದ್ದಾರೆ. ಬಸವ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ಇದನ್ನೂ ಓದಿ:ತುಮಕೂರಿನಲ್ಲಿ ಹೆಜ್ಜೇನು ದಾಳಿ: ಓರ್ವ ಸಾವು, ಮೂವರ ಸ್ಥಿತಿ ಗಂಭೀರ