ಕರ್ನಾಟಕ

karnataka

ಯಡಿಯೂರಪ್ಪ ಒಬ್ಬಂಟಿ ಅಲ್ಲ, ಅವರೊಟ್ಟಿಗೆ ನಾವೆಲ್ಲ ಇದ್ದೇವೆ: ರೇಣುಕಾಚಾರ್ಯ

By

Published : Mar 7, 2020, 7:00 AM IST

ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಬಜೆಟ್ ಮಂಡಿಸಿದ ಮೇಲೆ ಒಂಟಿಯಾಗಿಲ್ಲ. ಅವರ ಜೊತೆ ಪಕ್ಷ, ಲೋಕಸಭಾ ಸದಸ್ಯರು, ಶಾಸಕರು ಇದ್ದೇವೆ. ಒಂಟಿ, ಒಬ್ಬಂಟಿ, ಏಕಾಂಗಿ ಅನ್ನೋದು ಮಾಧ್ಯಮಗಳ ಸೃಷ್ಟಿ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.‌ರೇಣುಕಾಚಾರ್ಯ ಹೇಳಿದರು.

we are stand with cm BSY: M P renukacharaya
ಶಾಸಕ ಎಂ.ಪಿ.ರೇಣುಕಾಚಾರ್ಯ

ದಾವಣಗೆರೆ: ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಬಜೆಟ್ ಮಂಡಿಸಿದ ಮೇಲೆ ಒಂಟಿಯಾಗಿಲ್ಲ. ಅವರ ಜೊತೆ ಪಕ್ಷ, ಲೋಕಸಭಾ ಸದಸ್ಯರು, ಶಾಸಕರು ಇದ್ದೇವೆ. ಒಂಟಿ, ಒಬ್ಬಂಟಿ, ಏಕಾಂಗಿ ಅನ್ನೋದು ಮಾಧ್ಯಮಗಳ ಸೃಷ್ಟಿ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.‌ರೇಣುಕಾಚಾರ್ಯ ಹೇಳಿದರು.

ಶಾಸಕ ಎಂ.ಪಿ.ರೇಣುಕಾಚಾರ್ಯ

ಇಲ್ಲಿನ ಹೊನ್ನಾಳಿ ಪಟ್ಟಣದಲ್ಲಿ ಮಾತನಾಡಿದ ಅವರು, ರಾಜಕಾರಣದಲ್ಲಿ ಟೀಕೆ - ಟಿಪ್ಪಣಿ ಸಹಜ. ಬಜೆಟ್ ಬಗ್ಗೆ ಪಕ್ಷದಲ್ಲಿ ಯಾರೂ ಬೇಸರಗೊಂಡಿಲ್ಲ. ಯಡಿಯೂರಪ್ಪ ಒಂಟಿಯಾಗಿದ್ದಾರೆ ಎಂಬ ಬಗ್ಗೆ ಹೆಚ್ಚು ಮಹತ್ವ ಕೊಡುವ ಅಗತ್ಯವಿಲ್ಲ ಎಂದರು.

ಬಜೆಟ್​ನಲ್ಲಿ ಎಲ್ಲಾ ಇಲಾಖೆಗಳಿಗೂ ಅನುದಾನ ನೀಡಲಾಗಿದೆ‌. ಈ ಬಗ್ಗೆ ಆರೋಪ ಮಾಡುವುದು ಸರಿಯಲ್ಲ. ಹೊನ್ನಾಳಿಯಲ್ಲಿ ಕೃಷಿ ಮೇಳ ನಡೆಸುತ್ತಿದ್ದೇವೆ. ಇದು ಬಿಜೆಪಿ ಕೃಷಿ ಮೇಳ ಅಲ್ಲ. ಎಲ್ಲರೂ ಜೊತೆಗೂಡಿ ಮಾಡುವ ಕೃಷಿ ಮೇಳ ಎಂದರು.

ABOUT THE AUTHOR

...view details