ಕರ್ನಾಟಕ

karnataka

22 ಕೆರೆಗಳಿಗೆ ನೀರು ಸರಬರಾಜು ಪೈಪ್‌ಲೈನ್ ಕಳಪೆ: ಕಾರಂಜಿಯಂತೆ ಚಿಮ್ಮಿದ ನೀರು

By

Published : Jul 18, 2020, 8:09 PM IST

ಎಷ್ಟು ಬಾರಿ ಪೈಪ್​ಗಳಿಗೆ ತ್ಯಾಪೆ ಹಾಕಿದರೂ, ಮತ್ತೆ ಮತ್ತೆ ಬೇರೆ ಸ್ಥಳಗಳಲ್ಲಿ ನೀರಿನ ರಭಸಕ್ಕೆ ಪೈಪ್‌ಲೈನ್ ಒಡೆದು ನೀರು ಸರಬರಾಜು ನಿಲ್ಲುತ್ತಿದೆ.

Water supply pipeline to 22 lakes
ಕಾರಂಜಿಯಂತೆ ಚಿಮ್ಮಿದ ನೀರು

ಹರಿಹರ (ದಾವಣಗೆರೆ):ಕೆರೆಗಳಿಗೆ ನೀರು ಸರಬರಾಜು ಮಾಡುವ ಪೈಪ್‌ಲೈನ್ ನೀರಿನ ರಭಸಕ್ಕೆ ಒಡೆದು, ಕಾರಂಜಿಯ ರೀತಿಯಲ್ಲಿ ಆಕಾಶದೆತ್ತರಕ್ಕೆ ಚಿಮ್ಮುತ್ತಿದೆ. ತಾಲೂಕಿನ ಹರಗನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಪೈಪ್​ಲೈನ್​ ಒಡೆದಿದ್ದು, ವಾಹನ ಸವಾರರು ನೀರಿನ ಕಾರಂಜಿಯ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿರುವ ದೃಶ್ಯ ಕಂಡು ಬಂತು.

ಕಾರಂಜಿಯಂತೆ ಚಿಮ್ಮಿದ ನೀರು

ಈ ವರ್ಷದ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಿದ ತಿಂಗಳೊಳಗೆ ಎರಡು ಬಾರಿ ಪೈಪ್‌ಲೈನ್ ಒಡೆದಿದೆ. ಈ ಹಿಂದೆ ಬಾತಿ ಸಮೀಪ ಸೋರಿಕೆ ಕಂಡು ಬಂದರೆ, ಈ ಬಾರಿ ಹರಗನಹಳ್ಳಿ ಬಳಿ ಪೈಪ್ ಒಡೆದ ಕಾರಣ ಒಂದೇ ತಿಂಗಳಲ್ಲಿ ಒಂದು ವಾರ ನೀರು ಸರಬರಾಜಾಗಿಲ್ಲ. ಇದೇ ರೀತಿ ಹದಿನೈದು ದಿನಕ್ಕೊಮ್ಮೆ ಪೈಪ್ ಒಡೆದರೆ ಸಂಸದರು ಹೇಳಿದ 180 ದಿನ ನೀರು ಸರಬರಾಜು ಮಾಡುವ ಮಾತು ಸುಳ್ಳಾಗುತ್ತದೆ ಎಂಬುದು ಸ್ಥಳೀಯರ ಅಭಿಪ್ರಾಯ.

ಈ ಯೋಜನೆ ಪ್ರಾರಂಭವಾದಾಗಿನಿಂದಲೂ ಇದೇ ರೀತಿಯ ಸಮಸ್ಯೆ ಕಾಡುತ್ತಿದ್ದು, ಸ್ಥಳೀಯ ರೈತರ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗುತ್ತಿದೆ. ಎಷ್ಟು ಬಾರಿ ಪೈಪ್​ಗಳಿಗೆ ತ್ಯಾಪೆ ಹಾಕಿದರೂ ಮತ್ತೆ ಮತ್ತೆ ಬೇರೆ ಸ್ಥಳಗಳಲ್ಲಿ ನೀರಿನ ರಭಸಕ್ಕೆ ಪೈಪು ಒಡೆದು ಸರಬರಾಜು ನಿಲ್ಲುತ್ತಿದೆ. ತಿಂಗಳಲ್ಲಿ ಎರಡರಿಂದ ಮೂರು ಬಾರಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂಬುದು ಸ್ಥಳೀಯರ ಆರೋಪವಾಗಿದೆ.

ABOUT THE AUTHOR

...view details