ಕರ್ನಾಟಕ

karnataka

By

Published : Jul 25, 2022, 1:16 PM IST

Updated : Jul 25, 2022, 6:43 PM IST

ETV Bharat / state

ಮುಸಿಯಾ ಸೆರೆ ಹಿಡಿದು ಅರಣ್ಯ ಇಲಾಖೆಗೆ ಸೆಡ್ಡು ಹೊಡೆದ ಗ್ರಾಮಸ್ಥರು

ಗ್ರಾಮಸ್ಥರಿಗೆ ಕಾಟ ಕೊಡುತ್ತಿದ್ದ ಮುಸಿಯಾವನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಗೆ ಹೇಳಿದರೂ ಪ್ರಯೋಜನವಾಗದ ಕಾರಣ ಗ್ರಾಮಸ್ಥರೇ ಸೆರೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

ಗ್ರಾಮಸ್ಥರು ಸೆರೆ ಹಿಡಿದ ಮುಸಿಯಾ
ಗ್ರಾಮಸ್ಥರು ಸೆರೆ ಹಿಡಿದ ಮುಸಿಯಾ

ದಾವಣಗೆರೆ:ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ಮುಸಿಯಾವೊಂದು ಸಾರ್ವಜನಿಕರ ಮೇಲೆ ದಾಳಿ ನಡೆಸುತ್ತಿತ್ತು. ಇದರಿಂದ‌ ರೋಸಿ ಹೋದ ಗ್ರಾಮಸ್ಥರು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಕಾಡು ಪ್ರಾಣಿಯ ಉಪಟಳ ಹೆಚ್ಚಾದ ಬೆನ್ನಲ್ಲೇ ಇದೀಗ ಗ್ರಾಮಸ್ಥರೇ ಅದನ್ನು ಸೆರೆ ಹಿಡಿದು ಬೋನಿಗೆ ಹಾಕಿ, ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

ಲಿಂಗದಹಳ್ಳಿ ಗ್ರಾಮದಲ್ಲಿ ಸೆರೆಯಾದ ಮುಸಿಯಾ ಟ್ರ್ಯಾಕ್ಟರ್ ಚಲಾಯಿಸುತ್ತಿದ್ದವರು,‌ ಮಕ್ಕಳು, ಜನರ ಮೇಲೆ ದಾಳಿ ನಡೆಸಿ, ಹತ್ತಾರು ಜನರನ್ನು ಈಗಾಗಲೇ ಕಚ್ಚಿ ಪರಚಿ ಗಾಯಗೊಳಿಸಿದೆ.

ಮುಸಿಯಾ ಸೆರೆ ಹಿಡಿದು ಅರಣ್ಯ ಇಲಾಖೆಗೆ ಸೆಡ್ಡು ಹೊಡೆದ ಗ್ರಾಮಸ್ಥರು

ಇದನ್ನೂ ಓದಿ :ಜಿಲ್ಲಾಡಳಿತ, ಅರಣ್ಯ ಇಲಾಖೆ ಮಾಸ್ಟರ್ ಪ್ಲಾನ್​​​: ಸೋಲಿಗ ಜನರ ನೆರವಿಗೆ ಮಲ್ಟಿ ಪರ್ಪಸ್ ವಾಹನ

Last Updated : Jul 25, 2022, 6:43 PM IST

ABOUT THE AUTHOR

...view details