ಕರ್ನಾಟಕ

karnataka

ETV Bharat / state

ಧರ್ಮಸ್ಥಳ ಮಾದರಿಯಲ್ಲಿ ಗಣೇಶನಿಗೆ ಕಟ್ಟಡ ನಿರ್ಮಾಣ: ಗಾಳಿಗೆ ಮುರಿದು ಬಿತ್ತು ಬೃಹತ್​ ಮಂಟಪ - ಮಳೆಯಿಂದ ಮುರಿದು ಬಿದ್ದಿದೆ

ಧರ್ಮಸ್ಥಳ ಮಾದರಿಯಲ್ಲಿ, 45 ದಿನಗಳ ಕಾಲ ಶ್ರಮಿಸಿ ದಾವಣಗೆರೆಯಲ್ಲಿ ನಿರ್ಮಿಸಲಾಗಿದ್ದ ಗಣೇಶ ಮಂಟಪ ಗಾಳಿ, ಮಳೆಯಿಂದ ನೆಲಕ್ಕುರುಳಿದೆ.

ಗಾಳಿಗೆ ಮುರಿದು ಬಿದ್ದ ಮಂಟಪ

By

Published : Sep 5, 2019, 8:16 PM IST

ದಾವಣಗೆರೆ: ನಗರದ ಹೈಸ್ಕೂಲ್ ಮೈದಾನದಲ್ಲಿ ಹಿಂದೂ ಮಹಾ ಗಣಪತಿ ವೇದಿಕೆ ವತಿಯಿಂದ ರಾಜ್ಯದ ಪುಣ್ಯಕ್ಷೇತ್ರ ಧರ್ಮಸ್ಥಳ ಮಾದರಿಯಲ್ಲಿ, 45 ದಿನಗಳ ಕಾಲ ಶ್ರಮಿಸಿ, ನಿರ್ಮಿಸಿದ್ದ ಭವ್ಯವಾದ ಮಂಟಪ ನೆಲಕ್ಕುರುಳಿದೆ. ಇಂದು ಬೀಸಿದ ಗಾಳಿ-ಮಳೆಗೆ ಮಂಟಪ ಕುಸಿದು ಬಿದ್ದಿದೆ.

ನಾಲ್ಕು ದಿನಗಳ ಹಿಂದೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿದ್ದರಿಂದ ಜನರು ತಂಡೋಪತಂಡವಾಗಿ ಬಂದು ವೀಕ್ಷಿಸುತ್ತಿದ್ದರು. ಕೋಲ್ಕತ್ತಾ ಮೂಲದ 18 ಜನರ ತಂಡ ಸತತ 45 ದಿನಗಳ ಕಾಲ ಕೆಲಸ ಮಾಡಿ, 20 ಲಕ್ಷ ರೂ. ವೆಚ್ಚದಲ್ಲಿ ಈ ಬೃಹತ್ ಧರ್ಮಸ್ಥಳ ಮಾದರಿಯನ್ನು ನಿರ್ಮಿಸಿದ್ದಾರೆ. 45 ಅಡಿ ಎತ್ತರ, 160 ಅಡಿ ಅಗಲ, 120 ಅಡಿ ಉದ್ದದ ಈ ಬೃಹತ್ ಮಂಟಪ ಧರ್ಮಸ್ಥಳದ ಮೂಲ ಮಾದರಿಯಂತಿದೆ. ಈ ಮಂಟಪದಲ್ಲಿ 15 ಅಡಿ ಎತ್ತರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು, 10 ಅಡಿ ಎತ್ತರದ ಮಂಜುನಾಥ ಸ್ವಾಮಿಯ ಮೂರ್ತಿಯನ್ನು ಸಹ ಇಲ್ಲಿ ನಿರ್ಮಿಸಲಾಗಿದೆ.

ಇನ್ನು 21 ದಿನಗಳ ಕಾಲ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಧರ್ಮಸ್ಥಳ ಮಾದರಿಯಲ್ಲಿ ಮಂಟಪ ನಿರ್ಮಾಣವಾಗಿದ್ದ ಹಿನ್ನೆಲೆ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆ ಅವರು ಆಗಮಿಸುವ ನಿರೀಕ್ಷೆ ಇತ್ತು. ಆದರೆ, ಇಂದು ಸುರಿದ ಮಳೆ, ಗಾಳಿಗೆ ಮಂಟಪದ ಅರ್ಧ ಭಾಗ ಮುರಿದು ಬಿದ್ದಿದೆ.

ಗಾಳಿಗೆ ಮುರಿದು ಬಿದ್ದ ಮಂಟಪ

ಮಧ್ಯಾಹ್ನ ಬೀಸಿದ ಗಾಳಿ ಮಳೆಗೆ ಮಂಟಪದ ಎಡ ಭಾಗ ಸಂಪೂರ್ಣವಾಗಿ ನೆಲಕ್ಕುರುಳಿದೆ. ಗಾಳಿಯ ರಭಸಕ್ಕೆ ಕಂಬಗಳ ಸಮೇತ ಮಂಟಪ ನೆಲಕಚ್ಚಿದೆ. ಅಲ್ಲದೆ, ಮುಂಭಾಗದ ಆರು ಕಂಬಗಳು ಸಹ ವಾಲಿದ್ದು, ಇಡೀ ಮಂಟಪ ಶಿಥಿಲಗೊಂಡಿದೆ. ಮಂಟಪದ ಮುಂದೆ ಇದ್ದ ಶೆಡ್​ಗಳು, ತಗಡುಗಳು ಗಾಳಿಗೆ ಹಾರಿ ಹೋಗಿವೆ. ಈ ಘಟನೆಯಿಂದ ಟ್ರಸ್ಟ್ ಸದಸ್ಯರು ಮತ್ತು ಜನರು ಮರುಕಪಡುತ್ತಿದ್ದಾರೆ.

ABOUT THE AUTHOR

...view details