ಕರ್ನಾಟಕ

karnataka

ETV Bharat / state

ದಾವಣಗೆರೆಯಲ್ಲಿ ಮೌಢ್ಯ ಬಿಂಬಿಸುವ ಪದ್ಧತಿಗೆ ಶಾಸಕರಿಂದಲೇ ಚಾಲನೆ! - MLA MP Renukacharya

ಕೆಂಚಿಕೊಪ್ಪ ಗ್ರಾಮದಲ್ಲಿ ಮಾಯಮ್ಮ ಮತ್ತು ಮರಿಯಮ್ಮ ಎಂಬ ದೇವಿಗಳ ಪೂಜೆ ಬಳಿಕ ದಲಿತ ಸಮುದಾಯದ ಇಬ್ಬರು ಮಹಿಳೆಯರನ್ನು ಸಿಡಿ ಬಂಡಿಗೆ ಕಟ್ಟಿಕೊಂಡು ಮೆರವಣಿಗೆ ಮಾಡುವ ಪದ್ಧತಿಯೊಂದಕ್ಕೆ ಶಾಸಕರೇ ಚಾಲನೆ ನೀಡಿದ್ದಾರೆ.

Superstitious belief in Davangere
ಮೌಢ್ಯಾಚರಣೆಗೆ ಶಾಸಕರಿಂದಲೇ ಚಾಲನೆ...!

By

Published : Jan 28, 2020, 6:53 PM IST

Updated : Jan 29, 2020, 2:15 PM IST

ದಾವಣಗೆರೆ: ಮೌಢ್ಯ ನಿಷೇಧಕ್ಕೆ ರಾಜ್ಯ ಸರ್ಕಾರ ಮುಂದಾಗಿರುವ ನಡುವೆಯೇ ಸ್ವತಃ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮೌಢ್ಯವನ್ನು ಪ್ರತಿಬಿಂಬಿಸುವ ಆಚರಣೆಯೊಂದಕ್ಕೆ ಚಾಲನೆ ನೀಡಿರುವ ಘಟನೆ ಜಿಲ್ಲೆಯ ನ್ಯಾಮತಿ ತಾಲೂಕು ಕೆಂಚಿಕೊಪ್ಪ ಗ್ರಾಮದಲ್ಲಿ ನಡೆದಿದೆ.

ಕೆಂಚಿಕೊಪ್ಪ ಗ್ರಾಮದಲ್ಲಿ ಮಾಯಮ್ಮ ಮತ್ತು ಮರಿಯಮ್ಮ ಎಂಬ ದೇವಿಗಳ ಪೂಜೆ ಬಳಿಕ ದಲಿತ ಸಮುದಾಯದ ಇಬ್ಬರು ಮಹಿಳೆಯರನ್ನು ಸಿಡಿ ಬಂಡಿಗೆ ಕಟ್ಟಿಕೊಂಡು ಮೆರವಣಿಗೆ ಮಾಡುವ ಪದ್ಧತಿಗೆ ಶಾಸಕ ರೇಣುಕಾಚಾರ್ಯ ಚಾಲನೆ ನೀಡಿದ್ದಾರೆ.

ಮೌಢ್ಯ ಪ್ರತಿಬಿಂಬಿಸುವ ಪದ್ಧತಿಗೆ ಶಾಸಕರಿಂದಲೇ ಚಾಲನೆ!

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಎಂ.ಪಿ.ರೇಣುಕಾಚಾರ್ಯ, ಸಿಡಿ ಬಂಡಿ ಮೌಢ್ಯ ಅಲ್ಲ, ಇದೊಂದು ಪದ್ಧತಿ, ನಂಬಿಕೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಮಾಡುವ ಪೂಜೆ ಎಂದು ಹೇಳಿದ್ದಾರೆ.

Last Updated : Jan 29, 2020, 2:15 PM IST

ABOUT THE AUTHOR

...view details