ಕರ್ನಾಟಕ

karnataka

ETV Bharat / state

ಸೂಳೆಕೆರೆ ಭರ್ತಿಗೊಳಿಸಿದ ಮಳೆರಾಯ... ಅನ್ನದಾತನ ಮೊಗದಲ್ಲಿ ಸಂತಸ - Davanagere news, DAvanagere Sulekere

ಏಷ್ಯಾದಲ್ಲೇ 2 ನೇ ಅತೀ ದೊಡ್ಡ ಕೆರೆ ಎಂಬ ಹೆಗ್ಗಳಿಕೆಗೆ ಪಾತ್ರ ಆಗಿರುವ ಸೂಳೆಕೆರೆಗೆ ಭದ್ರಾ ಜಲಾಶಯದಿಂದಲೂ ನೀರು ಬಿಡಲಾಗಿದೆ. ಹಳ್ಳ ಕೊಳ್ಳಗಳಿಂದಲೂ ಯಥೇಚ್ಛವಾಗಿ ನೀರು ಬಂದ ಕಾರಣ ಸೂಳೆಕೆರೆ ಭರ್ತಿಯಾಗಿದೆ.

ಕೆರೆ

By

Published : Oct 24, 2019, 4:43 AM IST


ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಸೂಳೆಕೆರೆ ಭರ್ತಿಯಾಗಿದ್ದು, ರೈತಾಪಿ ವರ್ಗ ಹರ್ಷಗೊಂಡಿದೆ.

ಕಳೆದ ನಾಲ್ಕೈದು ದಿನಗಳಿಂದ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೆರೆಗೆ ಅಪಾರ ನೀರು ಹರಿದು ಬರುತ್ತಿದೆ. ಕಳೆದ ಹಲವು ವರ್ಷಗಳಿಂದ ಕೆರೆ ಭರ್ತಿಯಾಗಿರಲಿಲ್ಲ. ಈ ಬಾರಿ ಮಳೆ ಆರ್ಭಟಕ್ಕೆ ಕೆರೆ ಮೈದುಂಬಿ ಹರಿಯುತ್ತಿರುವುದು ಅನ್ನದಾತರ ಮೊಗದಲ್ಲಿ ಸಂತಸ ಮೂಡಿದೆ.

ದಾವಣಗೆರೆಯ ಸೂಳೆಕೆರೆ
ಏಷ್ಯಾದಲ್ಲೇ 2 ನೇ ಅತೀ ದೊಡ್ಡ ಕೆರೆ ಎಂಬ ಹೆಗ್ಗಳಿಕೆಗೆ ಪಾತ್ರ ಆಗಿರುವ ಸೂಳೆಕೆರೆಗೆ ಭದ್ರಾ ಜಲಾಶಯದಿಂದಲೂ ನೀರು ಬಿಡಲಾಗಿದೆ. ಹಳ್ಳ ಕೊಳ್ಳಗಳಿಂದಲೂ ಯಥೇಚ್ಛವಾಗಿ ನೀರು ಬಂದ ಕಾರಣ ಸೂಳೆಕೆರೆ ಭರ್ತಿಯಾಗಿದೆ. ಕಳೆದ ಏಳು ವರ್ಷಗಳ ಬಳಿಕ ಕೆರೆ ತುಂಬಿರುವುದಕ್ಕೆ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.ಅಷ್ಟೇ ಅಲ್ಲ, ನೀರಾವರಿ ಮತ್ತು ಕುಡಿಯುವ ನೀರಿಗಾಗಿ ಈ ಕೆರೆ ಉಪಯುಕ್ತವಾಗಿದೆ. ಈ ಬಾರಿ ಕೆರೆ ಭರ್ತಿಯಾಗುತ್ತಿರುವುದು ಜಿಲ್ಲೆಯ ರೈತರಿಗೂ ಖುಷಿ ತಂದಿದೆ.

ABOUT THE AUTHOR

...view details