ದಾವಣಗೆರೆ:ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಹೋಬಳಿಯ ಕಾಶಿಪುರದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸ್ಟೋಟಕವನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.
ಸಂತೆಬೆನ್ನೂರು ಪೊಲೀಸರ ದಾಳಿ: ಅಕ್ರಮ ಸ್ಫೋಟಕ ವಶಕ್ಕೆ - ಅಕ್ರಮ ಸ್ಫೋಟಕ ವಶಕ್ಕೆ
ಸಂತೆಬೆನ್ನೂರು ಪೊಲೀಸರು ಅಕ್ರಮ ಸ್ಫೋಟಕ ದಾಸ್ತಾನು ಮೇಲೆ ದಾಳಿ ನಡೆಸಿ, ಕಾಶೀಪುರ ಗ್ರಾಮದ ಜಮೀನೊಂದರಲ್ಲಿ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆಯ ಸ್ಥಳದಲ್ಲಿ ಅಕ್ರಮವಾಗಿ ಪರವಾನಿಗೆ ಇಲ್ಲದ ಸಂಗ್ರಹಿಸಿಟ್ಟ ಸ್ಟೋಟಕಗಳ ವಶಕ್ಕೆ ಪಡೆದರು.
![ಸಂತೆಬೆನ್ನೂರು ಪೊಲೀಸರ ದಾಳಿ: ಅಕ್ರಮ ಸ್ಫೋಟಕ ವಶಕ್ಕೆ santebennuru-police-seized-illegal-explosives](https://etvbharatimages.akamaized.net/etvbharat/prod-images/768-512-11232338-thumbnail-3x2-news.jpg)
ಸಂತೆಬೆನ್ನೂರು ಪೊಲೀಸರು ಅಕ್ರಮ ಸ್ಫೋಟಕ ದಾಸ್ತಾನು ಮೇಲೆ ದಾಳಿ ನಡೆಸಿ, ಕಾಶೀಪುರ ಗ್ರಾಮದ ಜಮೀನೊಂದರಲ್ಲಿ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆಯ ಸ್ಥಳದಲ್ಲಿ ಅಕ್ರಮವಾಗಿ ಪರವಾನಿಗೆ ಇಲ್ಲದ ಸಂಗ್ರಹಿಸಿಟ್ಟ ಸ್ಟೋಟಕಗಳ ವಶಕ್ಕೆ ಪಡೆದರು. ಈ ವೇಳೆ ಪರ್ವೀಜ್ ಎನ್ನುವ ಆರೋಪಿಯನ್ನು ವಶಕ್ಕೆ ಪಡೆದಿದ್ದು, ಮತ್ತೊಬ್ಬ ಆರೋಪಿ ಗಿರೀಶ್ ಘಟಮನ ಸ್ಥಳದಿಂದ ಪರಾರಿಯಾಗಿದ್ದಾನೆ.
ಘಟನ ಸ್ಥಳದಲ್ಲಿ 8 ಜಿಲೇಟಿನ್ ಕಡ್ಡಿ, ಒಂದು ಎಲೆಕ್ಟ್ರಾನಿಕ್ ಡಿಟೋನೇಟರ್, ಸೇರಿದಂತೆ ಹಲವು ಸ್ಟೋಟಕ ವಸ್ತುಗಳು ದೊರೆತಿವೆ. ಈ ಸಂಬಂಧ ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯಾರ ಜಮೀನಿನಲ್ಲಿ ಕಲ್ಲುಗಣಿಗಾರಿಕೆ ನಡೆಯುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿಲ್ಲ.