ಕರ್ನಾಟಕ

karnataka

ಸರ್ಕಾರಿ ಆಸ್ಪತ್ರೆಗೆ ಸ್ಯಾನಿಟೈಸರ್ ಸಿಂಪಡಿಸಿ, ಆ್ಯಂಬುಲೆನ್ಸ್ ಚಲಾಯಿಸಿದ ರೇಣುಕಾಚಾರ್ಯ

ಹೊನ್ನಾಳಿಯಲ್ಲಿ ಕೋವಿಡ್​ ಉಲ್ಭಣಗೊಳ್ಳುತ್ತಿರುವ ಹಿನ್ನೆಲೆ ಶಾಸಕ ರೇಣುಕಾಚಾರ್ಯ ನೇತೃತ್ವದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ತಾಲೂಕು ಆಸ್ಪತ್ರೆಗೆ ಸ್ಯಾನಿಟೈಸರ್ ಸಿಂಪಡಿಸಿ ಬಳಿಕ ನಾಲ್ಕು ಆ್ಯಂಬುಲೆನ್ಸ್​​​ಗಳಿಗೆ ಚಾಲನೆ ನೀಡಿದರು.

By

Published : May 27, 2021, 8:58 AM IST

Published : May 27, 2021, 8:58 AM IST

sanitization to hospital by MLA renukacharya
ಸರ್ಕಾರಿ ಆಸ್ಪತ್ರೆಗೆ ಸ್ಯಾನಿಟೈಸರ್ ಸಿಂಪಡನೆ ಮಾಡಿ, ಆ್ಯಂಬುಲೆನ್ಸ್ ಚಾಲಾಯಿಸಿದ ಶಾಸಕ ರೇಣುಕಾಚಾರ್ಯ

ದಾವಣಗೆರೆ: ಸೋಂಕು ಹರಡುತ್ತಿರುವ ಹಿನ್ನೆಲೆ ನಿನ್ನೆ ಶಾಸಕ ರೇಣುಕಾಚಾರ್ಯ ಜಿಲ್ಲೆಯ ಹೊನ್ನಾಳಿ ತಾಲೂಕು ಆಸ್ಪತ್ರೆಗೆ ಸ್ಯಾನಿಟೈಸರ್ ಸಿಂಪಡಣೆ ಮಾಡಿದರು. ಬಳಿಕ ನಾಲ್ಕು ಆ್ಯಂಬುಲೆನ್ಸ್​​​ಗಳಿಗೆ ಚಾಲನೆ ನೀಡಿ, ಸ್ವತಃ ತಾವೇ ಆ್ಯಂಬುಲೆನ್ಸ್ ಚಲಾಯಿಸಿದರು.

ರೇಣುಕಾಚಾರ್ಯರಿಂದ ಆಸ್ಪತ್ರೆಗೆ ಸ್ಯಾನಿಟೈಸರ್ ಸಿಂಪಡಣೆ

ಔಷಧಿ ಸಿಂಪಡಣೆ ಯಂತ್ರ ಹಿಡಿದು ಸ್ವತಃ ಸ್ಯಾನಿಟೈಸೇಷನ್​​​​ ಮಾಡಿದರು. ಹೊನ್ನಾಳಿಯಲ್ಲಿ ಕೊರೊನಾ ಆರ್ಭಟಿಸುತ್ತಿರುವ ಹಿನ್ನೆಲೆ ಶಾಸಕರು ಹಗಲು ರಾತ್ರಿಯೆನ್ನದೇ ಕೊರೊನಾ ಮುನ್ನೆಚ್ಚರಿಕೆ ಕ್ರಮ ವಹಿಸುತ್ತಿರುವುದು ಪ್ರಶಂಸೆಗೆ ಪಾತ್ರವಾಗಿದೆ.

ಇದನ್ನೂ ಓದಿ:ಸವದತ್ತಿಯಲ್ಲಿ 15 ದಿನಗಳ ಅಂತರದಲ್ಲಿ ಮೂವರು ಸಹೋದರರು ಕೋವಿಡ್​ಗೆ ಬಲಿ

ಸ್ಯಾನಿಟೈಸರ್​​ ಸಿಂಪಡಣೆ ಬಳಿಕ ಹೊನ್ನಾಳಿ-ನ್ಯಾಮತಿ ಜನರಿಗೆ ಉಚಿತ ಆ್ಯಂಬುಲೆನ್ಸ್​​​ ವ್ಯವಸ್ಥೆ ಮಾಡಿ, ನಾಲ್ಕು ಆ್ಯಂಬುಲೆನ್ಸ್​​​ಗಳಿಗೆ ಚಾಲನೆ ನೀಡಲಾಯಿತು. ಶಾಸಕ ರೇಣುಕಾಚಾರ್ಯ ತಂದೆ-ತಾಯಿಯ ಸವಿನೆನಪಿಗಾಗಿ ಉಚಿತವಾಗಿ ನಾಲ್ಕು ಆ್ಯಂಬುಲೆನ್ಸ್ ಸೇವೆಗೆ ಚಾಲನೆ ನೀಡಲಾಗಿದ್ದು, ಸಂಸದ ಜಿ.ಎಂ.ಸಿದ್ದೇಶ್ವರ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಭಾಗಿಯಾಗಿದ್ರು. ಬಳಿಕ ಶಾಸಕ ರೇಣುಕಾಚಾರ್ಯ ಸ್ವತಃ ಆ್ಯಂಬ್ಯುಲೆನ್ಸ್ ಓಡಿಸಿದರು.

ABOUT THE AUTHOR

...view details