ಕರ್ನಾಟಕ

karnataka

ETV Bharat / state

ವಾಲ್ಮೀಕಿ ಜಾತ್ರೆ ಪೂರ್ವಭಾವಿ ಸಭೆಯಲ್ಲಿ ಸಚಿವ ರಮೇಶ್ ಜಾರಕಿಹೊಳಿ ಭಾಗಿ - ವಾಲ್ಮೀಕಿ ಜಾತ್ರೆ

ಕೊರೊನಾ ನಡುವೆಯೂ ಜಾತ್ರೆ ಮಾಡಲು ಶ್ರೀಮಠ ನಿರ್ಧರಿಸಿದೆ. ವಾಲ್ಮೀಕಿ ಜಾತ್ರೆ ಸಮಿತಿಯ ಅಧ್ಯಕ್ಷರಾಗಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಆಯ್ಕೆ ಮಾಡಲಾಗಿದೆ. ಇಡೀ ಜಾತ್ರೆಯ ಉಸ್ತುವಾರಿಯನ್ನು ಸಚಿವರು ನೋಡಿಕೊಳ್ಳಲಿದ್ದಾರೆ..

meeting
ವಾಲ್ಮೀಕಿ ಜಾತ್ರೆ ಪೂರ್ವಭಾವಿ ಸಭೆ

By

Published : Jan 11, 2021, 2:50 PM IST

ದಾವಣಗೆರೆ :ಫೆ.08 ಹಾಗೂ 09ಕ್ಕೆ ನಡೆಯುವ ವಾಲ್ಮೀಕಿ ಜಾತ್ರೆಯ ಪೂರ್ವಭಾವಿ ಸಭೆಯನ್ನು ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿರುವ ವಾಲ್ಮೀಕಿ ಗುರು ಪೀಠದಲ್ಲಿ ಹಮ್ಮಿಕೊಳ್ಳಲಾಗಿತ್ತು.‌

ವಾಲ್ಮೀಕಿ ಪೀಠದ ಪ್ರಸನ್ನಾನಂದ ಪುರಿಶ್ರೀ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಭಾಗಿಯಾಗಿದ್ದರು. ಸಭೆಯಲ್ಲಿ ಜಾತ್ರೆಯ ರೂಪುರೇಷೆ ಬಗ್ಗೆ ಚರ್ಚಿಸಲಾಯಿತು.

ವಾಲ್ಮೀಕಿ ಜಾತ್ರೆ ಪೂರ್ವಭಾವಿ ಸಭೆ

ಇನ್ನು, ಮೂರನೇ ವರ್ಷದ ವಾಲ್ಮೀಕಿ ಜಾತ್ರೆ ಇದಾಗಿದೆ. ಕೊರೊನಾ ನಡುವೆಯೂ ಜಾತ್ರೆ ಮಾಡಲು ಶ್ರೀಮಠ ನಿರ್ಧರಿಸಿದೆ. ವಾಲ್ಮೀಕಿ ಜಾತ್ರೆ ಸಮಿತಿಯ ಅಧ್ಯಕ್ಷರಾಗಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಆಯ್ಕೆ ಮಾಡಲಾಗಿದೆ. ಇಡೀ ಜಾತ್ರೆಯ ಉಸ್ತುವಾರಿಯನ್ನು ಸಚಿವರು ನೋಡಿಕೊಳ್ಳಲಿದ್ದಾರೆ.

ಓದಿ...ಪದವಿ, ಸ್ನಾತಕೋತ್ತರ‌ ಕೋರ್ಸ್​ಗಳಿಗೆ ಜ.15 ರಿಂದ‌ ಆಫ್​ಲೈನ್ ತರಗತಿ ಆರಂಭ: ಡಿಸಿಎಂ ಅಶ್ವತ್ಥ ನಾರಾಯಣ

ಈ ಸಭೆಯಲ್ಲಿ ಬಳ್ಳಾರಿ ಸಂಸದ ದೇವೆಂದ್ರಪ್ಪ, ಸಂಡೂರಿನ ಶಾಸಕ ತುಕರಾಂ, ಕಂಪ್ಲಿ ಶಾಸಕ ಗಣೇಶ್, ಹುಣಸೂರು ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಭಾಗಿಯಾಗಿದ್ದರು.

ABOUT THE AUTHOR

...view details