ಕರ್ನಾಟಕ

karnataka

By

Published : Jun 10, 2020, 2:29 AM IST

ETV Bharat / state

ಕಂಟೈನ್​ಮೆಂಟ್ ಝೋನ್​ಗಳ ವಾಸಿಗಳಿಗೆ ಕಿಟ್ ನೀಡುವಂತೆ ಒತ್ತಾಯ

ದಾವಣಗೆರೆಯ ಕಂಟೈನ್​ಮೆಂಟ್ ​ಝೋನ್​ಗಳಲ್ಲಿ ಬಿಗಿಯಾದ ಕ್ರಮಕೈಗೊಳ್ಳಲಿ. ಆದರೆ ಬಡವರೇ ಹೆಚ್ಚಾಗಿ ವಾಸಿಸುತ್ತಿರುವ ಈ ಪ್ರದೇಶಗಳ ಜನರಿಗೆ ಜಿಲ್ಲಾಡಳಿತ ಆಹಾರದ ಕಿಟ್​ಗಳನ್ನು ನೀಡಬೇಕು ಎಂದು ಮಹಾನಗರ ಪಾಲಿಕೆಯ ಪ್ರತಿಪಕ್ಷ ನಾಯಕ ಎ. ನಾಗರಾಜ್ ಒತ್ತಾಯಿಸಿದರು.

nagaraj-press-meet
ವಿಪಕ್ಷ ನಾಯಕ ನಾಗರಾಜ್ ಒತ್ತಾಯ

ದಾವಣಗೆರೆ:ಕಂಟೈನ್​ಮೆಂಟ್ ಝೋನ್​ಗಳ ನಿವಾಸಿಗಳು ಬಹಳ ಕಷ್ಟ ಅನುಭವಿಸುತ್ತಿದ್ದು, ಮನೆಯಿಂದ ಹೊರಗೆ ಬರಲು ಆಗುತ್ತಿಲ್ಲ.‌ ಈ ಬಗ್ಗೆ ಗಮನಹರಿಸದ ಜಿಲ್ಲಾಡಳಿತವು ಕಷ್ಟಕ್ಕೆ ಸ್ಪಂದಿಸುವ ಗೋಜಿಗೂ ಹೋಗಿಲ್ಲ ಎಂದು ಮಹಾನಗರ ಪಾಲಿಕೆಯ ಪ್ರತಿಪಕ್ಷ ನಾಯಕ ಎ. ನಾಗರಾಜ್ ಆರೋಪಿಸಿದ್ದಾರೆ.

ಕಂಟೈನ್​ಮೆಂಟ್ ಝೋನ್​ಗಳ ವಾಸಿಗಳಿಗೆ ಕಿಟ್ ಕೊಡಿ

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕಿತರು ಹೆಚ್ಚಿರುವ ಕಾರಣ ಜಾಲಿನಗರ, ಬಾಷಾನಗರ, ಇಮಾಮ್ ನಗರ, ಬಸವರಾಜಪೇಟೆ ಸೇರಿದಂತೆ ಹಲವೆಡೆ ಕಂಟೈನ್​ಮೆಂಟ್ ಝೋನ್​ಗಳನ್ನು ಮಾಡಲಾಗಿದೆ. 100 ಅಡಿ ಝೋನ್ ಮಾಡಿದ್ದರೂ ಅಕ್ಕಪಕ್ಕದಲ್ಲಿಯೇ ಚಿಕ್ಕದಾಗಿ ಮನೆ ಕಟ್ಟಿಕೊಂಡಿರುವ ಸುಮಾರು 70 ಮನೆಗಳು ಈ ವ್ಯಾಪ್ತಿಯಲ್ಲಿ ಬರುತ್ತವೆ. ಇಲ್ಲಿನ ಜನರಿಗೆ ಸೌಲಭ್ಯ ನೀಡುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿದರು.

ಕಂಟೈನ್​ಮೆಂಟ್ ​ಝೋನ್​ಗಳಲ್ಲಿ ಬಿಗಿಯಾದ ಕ್ರಮ ಕೈಗೊಳ್ಳಲಿ, ಅದಕ್ಕೆ ಅಭ್ಯಂತರವೇನೂ ಇಲ್ಲ. ಆದರೆ ಬಡವರೇ ಹೆಚ್ಚಾಗಿ ವಾಸಿಸುತ್ತಿರುವ ಈ ಪ್ರದೇಶಗಳ ಜನರಿಗೆ ಜಿಲ್ಲಾಡಳಿತ ಆಹಾರದ ಕಿಟ್​ಗಳನ್ನು ನೀಡಬೇಕು. ಈ ಕೆಲಸ ಆಗಿಲ್ಲ.‌ ಕಾರ್ಪೊರೇಟರ್​ಗಳು ಹೋದರೆ ಜನರು ವಿಷದ ಬಾಟಲ್ ಕೊಡಿ ಕುಡಿಯುತ್ತೇವೆ. ಇಂಥ ನರಕದ ಬದುಕು ಬೇಡ ಎನ್ನುತ್ತಿದ್ದಾರೆ. ಕೊರೊನಾ‌ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜಿಲ್ಲಾಡಳಿತಕ್ಕೆ ಹಣ ಬಿಡುಗಡೆ ಮಾಡಿದೆ. ಈ ಹಣವನ್ನು ಬಡವರಿಗೆ ಆಹಾರದ ಕಿಟ್​ಗಳನ್ನು ನೀಡಲು ವಿನಿಯೋಗಿಸಲಿ ಎಂದು ನಾಗರಾಜ್ ಆಗ್ರಹಿಸಿದರು.

ABOUT THE AUTHOR

...view details