ಕರ್ನಾಟಕ

karnataka

ETV Bharat / state

ಬೈಕ್ ಪಲ್ಟಿಯಾಗಿ ಸವಾರ ಸಾವು, ಮತ್ತೋರ್ವನ ಸ್ಥಿತಿ ಗಂಭೀರ - one dies due to bike accident

ಬೈಕ್ ಸವಾರ ತಿರುವನ್ನು ಲೆಕ್ಕಿಸದೆ ಬಂದ ಕಾರಣ ಬೈಕ್ ಪಲ್ಟಿಯಾದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಗಳೂರು ಬಳಿ ನಡೆದಿದೆ.

ಬೈಕ್ ಪಲ್ಟಿ
ಬೈಕ್ ಪಲ್ಟಿ

By

Published : Jan 3, 2020, 11:03 AM IST

ದಾವಣಗೆರೆ: ಬೈಕ್ ಪಲ್ಟಿಯಾದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಗಳೂರು ತಾಲೂಕಿನ ರಸ್ತಮಾಚಿಕೆರೆ ಗ್ರಾಮದ ಕೆರೆಯ ಬಳಿ ಸಂಭವಿಸಿದೆ.

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮಡಕಲಕಟ್ಟೆ ಗ್ರಾಮದ ಮಹಾಂತೇಶ್ ಮೃತ ಬೈಕ್ ಸವಾರ. ಹಿಂಬದಿ ಕುಳಿತಿದ್ದ ಪೂಜಾರ್ ಬೋಪಣ್ಣ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ರಸ್ತಮಾಚಿಕೆರೆಯ ಕ್ರಾಸ್ ಬಳಿ ಜಗಳೂರು ಕಡೆಯಿಂದ ದಾವಣಗೆರೆಗೆ ಬೈಕ್​ನಲ್ಲಿ ತೆರಳುವ ವೇಳೆ ಬೈಕ್ ಸವಾರ ತಿರುವನ್ನು ಲೆಕ್ಕಿಸದೆ ಬಂದ ಕಾರಣ ಬೈಕ್ ಪಲ್ಟಿಯಾದ ಪರಿಣಾಮ ಈ ಅವಘಡ ಸಂಭವಿಸಿದೆ.

ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details