ದಾವಣಗೆರೆ:ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಅವರಿಗೆ ಕೊಲೆ ಬೆದರಿಕೆಯುಳ್ಳ ಅನಾಮಧೇಯ ಪತ್ರ ಬಂದಿದೆ.
ಅನಾಮಧೇಯ ವ್ಯಕ್ತಿಯೊಬ್ಬ ಪೋಸ್ಟಲ್ ಕಾರ್ಡ್ ಮೂಲಕ ಅತ್ಯಂತ ಅವಾಚ್ಯ ಶಬ್ದಗಳಲ್ಲಿ ಕೊಲೆ ಬೆದರಿಕೆ ಹಾಕಿದ್ದಾನೆ. ರಾಜನಹಳ್ಳಿ ಶಿವಕುಮಾರ್ ಈ ಹಿಂದೆ ಎಸ್.ಎಸ್.ಮಾಲ್ ತೆರವು ಮಾಡುವುದಾಗಿ ಹೇಳಿದ್ದರು. ಆದ್ರೀಗ ಎಸ್.ಎಸ್.ಮಾಲ್ ತಂಟೆಗೆ ಬಂದರೆ ಕೊಲೆ ಮಾಡುವುದಾಗಿ ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ. ಮಾಲ್ ತೆರವಿನ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಮಾತ್ರವಲ್ಲ ಕಾನೂನು ಪ್ರಕಾರ ಚರ್ಚೆ ನಡೆಸಿ ಒತ್ತುವರಿ ಜಾಗ ಪಡೆಯುವುದಾಗಿ ಶಿವಕುಮಾರ್ ಹೇಳಿದ್ದರು.ಓದಿ:ದಾವಣಗೆರೆ: ತಳಮಟ್ಟದಲ್ಲಿ ಪಕ್ಷ ಸಂಘಟಿಸಲು ಡಿ.4ರಂದು ಬಿಜೆಪಿಯ 'ಗ್ರಾಮ ಸ್ವರಾಜ್ಯ' ಸಮಾವೇಶ